ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಟಿ.ಪ್ರಭಾಕರ್, ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಎ.ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಕೆ.ಚೌಟ, ಸಹಾಯಕ ಕಾರ್ಯದರ್ಶಿಗಳಾಗಿ ಕಮಲೇಶ್, ಹರೀಶ್ ಜೆ.ಪದ್ಮನಾಭ, ಖಜಾಂಚಿಯಾಗಿ ಎಸ್.ಪ್ರಭುದೇವ್ ಆರಾಧ್ಯ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರು- ಉಮಾ ಪಾಟೀಲ್, ಡಾ.ಪ್ರಭಾಶಂಕರ್, ಎಸ್.ರಾಮಸುಬ್ರಹ್ಮಣ್ಯನ್, ಡಾ. ಜಿ. ಲಕ್ಷ್ಮೀಪತಿ, ಎಸ್.ಎನ್.ಶಶಿಧರ್, ಬಿ.ಎಲ್.ಶ್ರೀನಿವಾಸ್, ಜಿ.ಎನ್.ಸತ್ಯನಾರಾಯಣ. ಇವರ ಅಧಿಕಾರಾವಧಿ ಮೂರು ವರ್ಷಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.