ಹೊಸಕೋಟೆ: ತಾಲ್ಲೂಕಿನ ಅಪ್ಪಸಂದ್ರ ಗ್ರಾಮದ ಬಳಿ ಸರಕು ಸಾಗಾಣೆ ಟೆಂಪೊ ಮಗುಚಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಲಕ ಬಸವರಾಜು(40) ಮೃತಪಟ್ಟ ದುರ್ದೈವಿ.
ದೊಡ್ಡನಲ್ಲಾಳ ಗ್ರಾಮದ ಬಸವರಾಜು ಟೆಂಪೊದಲ್ಲಿ ತರಕಾರಿ ಮೂಟೆಗಳನ್ನು ತುಂಬಿಕೊಂಡು ಬೆಂಗಳೂರಿನ ಮಾರುಕಟ್ಟೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.