ADVERTISEMENT

ಟ್ರ್ಯಾಕ್ಟರ್‌ ಮಗುಚಿ ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 19:32 IST
Last Updated 2 ಮಾರ್ಚ್ 2019, 19:32 IST
ಆನಂದ್
ಆನಂದ್   

ಹೆಸರಘಟ್ಟ: ಇಲ್ಲಿಯ ಫಾರ್ಮ್ ಹೌಸ್‍ನ ಮೀನುಗಾರಿಕೆ ಕೇಂದ್ರದ ಬಳಿ ಮಣ್ಣಿನ ಕೆಲಸ ಮಾಡುತ್ತಿದ್ದಾಗ ಟ್ರ್ಯಾಕ್ಟರ್‌ ಮಗುಚಿ ಚಾಲಕ ಆನಂದ್‌(29) ಮೃತಪಟ್ಟಿದ್ದಾರೆ.

ಮೃತ ಯುವಕ ಸೊಣೇನಹಳ್ಳಿ ಗ್ರಾಮದ ನಿವಾಸಿ. ಮಣ್ಣಿನ್ನು ಟ್ರ್ಯಾಲಿಯಲ್ಲಿ ತುಂಬಿಕೊಂಡು ಎಂಜಿನ್‌ಗೆ ಕೊಂಡಿಯನ್ನು ಜೋಡಿಸುವಾಗ, ಟ್ರ್ಯಾಕ್ಟರ್‌ ಬಲಗಡೆ ಮಗುಚಿಕೊಂಡಿದೆ. ಅದರಡಿ ಆನಂದ್‌ ಸಿಲುಕಿ ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

ಇದ್ದೊಬ್ಬ ಮಗನಾದ ಆನಂದ್‌ ಅವರನ್ನು ಕಳೆದುಕೊಂಡ ಬೈರೇಗೌಡರ ಆಕ್ರಂದನ ಮುಗಿಲು ಮುಟ್ಟಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.