ADVERTISEMENT

ನಾರಾಯಣಸಾ ನಿಧನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ಬೆಂಗಳೂರು: ‘ದಿ ಪ್ರಿಂಟರ್ಸ್‌ (ಮೈಸೂರ್) ಪ್ರೈ ಲಿಮಿಟೆಡ್’ನ ನಿರ್ದೇಶಕ ಎಸ್.ಡಿ. ನಾರಾಯಣಸಾ (89) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ಶುಕ್ರವಾರ ನಿಧನರಾದರು.

ಅವರು ಪುತ್ರರಾದ ಎಸ್.ಎನ್.ಶ್ರೀನಿವಾಸಮೂರ್ತಿ,ಎಸ್.ಎನ್.ಶಿವಶಂಕರ್, ಪುತ್ರಿಯರಾದ ಚಂದ್ರಕಾಂತಾ ಕಬಾಡಿ, ಅಮರ ರತ್ನಾ ಡೊಂಡಾಳೆ ಹಾಗೂ ಕುಟುಂಬದವರನ್ನು ಅಗಲಿದ್ದಾರೆ.

‘ಪ್ರಜಾವಾಣಿ’,  ‘ಡೆಕ್ಕನ್‌ಹೆರಾಲ್ಡ್’ ಮಾಲೀಕತ್ವದ ದಿ ಪ್ರಿಂಟರ್ಸ್‌ (ಮೈಸೂರ್) ಪ್ರೈ ಲಿಮಿಟೆಡ್‌ನ ನಿರ್ದೇಶಕರಾಗಿ ಕಳೆದ 20 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು ಎಸ್. ಧೋಂಡುಸಾ ಗೋಲ್ಡ್‌ಥ್ರೆಡ್ ಕಾರ್ಖಾನೆಯ ಮಾಲೀಕರಾಗಿದ್ದರು.

ADVERTISEMENT

ಶ್ರೀ ಸುಧಾ ಕೋ ಆಪರೇಟಿವ್ ಬ್ಯಾಂಕ್‌ನ ಸಂಸ್ಥಾಪಕ ನಿರ್ದೇಶಕರಾಗಿ, ಬೆಂಗಳೂರು ಟರ್ಫ್ ಕ್ಲಬ್‌ನ ಹಿರಿಯ ಸದಸ್ಯರಾಗಿ ಹಾಗೂ ಧೋಂಡುಸಾ ಧರ್ಮಸಂಸ್ಥೆಯ ಟ್ರಸ್ಟಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಶನಿವಾರ ಮಧ್ಯಾಹ್ನ 2.30ಕ್ಕೆ ಚಾಮರಾಜಪೇಟೆಯ ಪಾಲಿಕೆ ಚಿತಾಗಾರದಲ್ಲಿ ಮೃತರ ಅಂತ್ಯಸಂಸ್ಕಾರ ನಡೆಯಲಿದೆ. ಮಾಹಿತಿಗೆ ಮೊಬೈಲ್: 98450 07945, 9845062118 ಅನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.