ADVERTISEMENT

ಬೀದಿ ನಾಯಿ ಹಾವಳಿ; ಮಹಿಳೆಗೆ ಗಾಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 19:55 IST
Last Updated 1 ಡಿಸೆಂಬರ್ 2012, 19:55 IST

ಬೆಂಗಳೂರು:  ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜ್ಞಾನಜ್ಯೋತಿ ನಗರದಲ್ಲಿ ನಾಯಿಯೊಂದು ಮಹಿಳೆಯೊಬ್ಬರನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ.

ಜ್ಞಾನಜ್ಯೋತಿ ನಗರದ ಅವಿನಾಶ್ ಅವರ ಪತ್ನಿ ಜ್ಯೋತಿ ತೀವ್ರ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುಳಸಿ ಪೂಜೆಗಾಗಿ ಅವರು ನ.25ರಂದು ಮಲ್ಲತ್ತಹಳ್ಳಿಯಲ್ಲಿರುವ ತಮ್ಮ ತಾಯಿಯ ಮನೆಗೆ ಹೋಗುತ್ತಿದ್ದರು. ಈ ವೇಳೆ ನಾಯಿಯೊಂದು ಏಕಾಏಕಿ ಅವರ ಮೇಲೆ ದಾಳಿ ನಡೆಸಿದೆ.

`ಘಟನೆಯಲ್ಲಿ ಜ್ಯೋತಿಯ ಅರ್ಧ ಮೂಗು ತುಂಡಾಗಿದೆ. ಬಲಗಣ್ಣಿಗೆ ಗಂಭೀರ ಗಾಯವಾಗಿದ್ದು, ಕೈ ಕಾಲುಗಳಿಗೂ ಸಣ್ಣ ಪುಟ್ಟ ಗಾಯಗಳಾಗಿವೆ~ ಎಂದು ಅವರ ಪತಿ ಅವಿನಾಶ್ `ಪ್ರಜಾವಾಣಿ~ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.