ಹೊಸಕೋಟೆ: ಗೋದಾಮಿನಲ್ಲಿ ಸಂಗ್ರಹವಿದ್ದ ಸೊಳ್ಳೆನಾಶಕ ಬತ್ತಿಗಳ ಪ್ಯಾಕೆಟ್ಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಪಟ್ಟಣದ ಕಮ್ಮೇವಾರಿ ನಗರದಲ್ಲಿ ಭಾನುವಾರ ನಡೆದಿದೆ.
ಸೊಳ್ಳೆನಾಶಕ ಬತ್ತಿಗಳ ಪ್ಯಾಕೆಟ್ ಪ್ರಕಾಶ ಎನ್ನುವವರಿಗೆ ಸೇರಿದ್ದು, ಅಂದಾಜು ₹37 ಲಕ್ಷ ಹಾನಿಯಾಗಿದೆ. ಭಾನುವಾರ ರಜೆ ಇದ್ದಿದ್ದರಿಂದ ಗೋದಾಮಿಗೆ ಬೀಗ ಹಾಕಲಾಗಿತ್ತು. ಮಧ್ಯಾಹ್ನ ಗೋದಾಮಿನಿಂದ ಹೊಗೆಬರುತ್ತಿರುವುದನ್ನುನೋಡಿದ ಅಲ್ಲಿನ ನಿವಾಸಿಗಳು ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ದೂರು ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.