ಬೆಂಗಳೂರು: ನಗರದಲ್ಲಿ `ಮಣಪ್ಪುರಂ ಚಿಟ್ಸ್'ನ ಪ್ರಥಮ ಶಾಖೆಯನ್ನು ನಗರದ ಹೊಸಕರೆಹಳ್ಳಿಯಲ್ಲಿ ಈಚೆಗೆ ಆರಂಭಿಸಲಾಯಿತು. ಪಾಲಿಕೆ ಸದಸ್ಯ ಎಚ್.ನಾರಯಣ ಶಾಖೆಯನ್ನು ಉದ್ಘಾಟಿಸಿದರು.
ಮಣಪ್ಪುರಂ ಚಿಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಪ್ರೊ.ಕೆ.ಜಿ.ರವಿ, `ಗ್ರಾಹಕರ ಖುಷಿಯೇ ಮೊದಲ ಆದ್ಯತೆ. ಫಂಡ್ನ ಯೋಜನೆಗಳಿಂದ ಗ್ರಾಹಕರಿಗೆ ಸಂಪೂರ್ಣ ಪ್ರಯೋಜನವಾಗಲಿದೆ' ಎಂದು ತಿಳಿಸಿದರು.
`ಗ್ರಾಹಕರಿಗೆ ತೊಂದರೆಯಾಗದಂತೆ ನೀತಿ ನಿಯಮಗಳನ್ನು ಪಾಲಿಸುವುದರೊಂದಿಗೆ ಹೆಚ್ಚಿನ ವಿಶ್ವಾಸರ್ಹತೆಯನ್ನು ಕಾಯ್ದುಕೊಳ್ಳಲಾಗುವುದು' ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.