ADVERTISEMENT

ಮಾಂಸದ ಬಿರಿಯಾನಿಗಾಗಿ ಮುರಿದ ಮದುವೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 20:05 IST
Last Updated 10 ಮಾರ್ಚ್ 2014, 20:05 IST

ಬೆಂಗಳೂರು: ವಿವಾಹಪೂರ್ವ ಔತ­ಣಕ್ಕೆ ಮಾಂಸದ ಬಿರಿಯಾನಿ ಮಾಡಿ­ಸಲಿಲ್ಲ ಎಂಬ ಕಾರಣಕ್ಕೆ ಮದುವೆ­ಯೊಂದು ಮುರಿದು ಬಿದ್ದಿದೆ. ದುಬೈನಲ್ಲಿ ಉದ್ಯೋಗದಲ್ಲಿರುವ ನಗ­­ರದ ಕಾಡುಗೊಂಡನಹಳ್ಳಿಯ ಸೈಫುಲ್ಲಾ ಮದುವೆ ಯಾಸ್ಮಿನಾ ತಾಜ್‌ ಎಂಬುವರ ಜತೆ ಸೋಮ­ವಾರ (ಮಾ.10) ನಿಶ್ಚಯವಾಗಿತ್ತು.

ಶುಕ್ರವಾರ ನಡೆದ ವಿವಾಹ­ಪೂರ್ವ ಔತಣಕ್ಕೆ ಮಾಂಸದ ಬಿರಿ­ಯಾನಿ ಮಾಡಿ­­ಸುವಂತೆ ವರನ ಕಡೆ­ಯವರು ಹೇಳಿದ್ದರು. ಆದರೆ, ವಧು­ವಿನ ಕಡೆ­ಯವರು ಕೋಳಿ ಬಿರಿಯಾನಿ ಮಾಡಿ­ಸಿದ್ದರು. ಇದರಿಂದ ಅಸಮಾಧಾನ­ಗೊಂಡ ವರನ ಕಡೆಯವರು ತಗಾದೆ ತೆಗೆದಿದ್ದಾರೆ.

ಮಾಂಸದ ಬಿರಿಯಾನಿ ಮಾಡಿ­ಸದೆ ಸಂಬಂಧಿಕರ ಎದುರು ಅವ­ಮಾನ ಮಾಡಿದ್ದೀರಿ ಎಂದು ಸೈಫುಲ್ಲಾ ಕುಟುಂಬದವರು ವಧು­ವಿನ ಪೋಷ­ಕರ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ, ಅಡುಗೆಯ ವಿಷಯಕ್ಕೆ ಇಷ್ಟೆಲ್ಲಾ ರಾದ್ಧಾಂತ ಮಾಡಿರುವ ವರನ ಪೋಷಕರು ಮದುವೆ ಬಳಿಕ ತನ್ನನ್ನು ಚೆನ್ನಾಗಿ ನೋಡಿಕೊಳ್ಳುವುದು ಅನುಮಾನ ಎಂದು ವದು ಯಾಸ್ಮಿನ್‌ ಆರೋಪಿಸಿ ಮದುವೆಗೆ ಅಸಮ್ಮತಿ ಸೂಚಿಸಿದ್ದಾರೆ.

ಪ್ರಕರಣ ಸಂಬಂಧ ಎರಡೂ ಕುಟುಂಬ­ದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರು ನಡೆ­ಸಿದ ರಾಜೀ ಸಂಧಾನವೂ ವಿಫಲ­ವಾಗಿದೆ.  ಎರಡೂ ಕುಟುಂಬಗಳು ಮದು­ವೆಗಾಗಿ ನೀಡಿದ್ದ ಉಡುಗೊರೆ­ಗಳನ್ನು ಪರಸ್ಪರ ಹಿಂದಿರುಗಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.