ADVERTISEMENT

ಮಾಂಸ ಮಾರಾಟ ನಿಷೇಧ ವಿರೋಧಿಸಿ ನಾಳೆ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಬೆಂಗಳೂರು: `ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದಂದು ಮಾಂಸ ಮಾರಾಟ ನಿಷೇಧವನ್ನು ವಿರೋಧಿಸಿ, ಏ.14 ರಂದು ಪುರಭವನದ ಮುಂದೆ ಮಾಂಸದೂಟ ಮಾಡಿ, ಬೃಹತ್ ರ‌್ಯಾಲಿ ನಡೆಸಲಾಗುವುದು~ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಎನ್. ಮೂರ್ತಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯ ಸರ್ಕಾರವು ಅಂಬೇಡ್ಕರ್ ಜಯಂತಿ, ಮಹಾಶಿವರಾತ್ರಿ, ಶ್ರೀ ರಾಮನವಮಿ, ಸರ್ವೋದಯ ದಿನ, ಮಹಾವೀರ ಜಯಂತಿ ಹೀಗೆ ಹಬ್ಬಗಳಂದು ಮಾಂಸ ಮಾರಾಟವನ್ನು ನಿಷೇಧಿಸಿ ಸಂವಿಧಾನ ಬದ್ಧವಾದ ಆಹಾರ ಪದ್ಧತಿಯ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ~ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.