ADVERTISEMENT

ಮೂರು ಕೋಟಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 19:30 IST
Last Updated 22 ಮಾರ್ಚ್ 2011, 19:30 IST

ಪೀಣ್ಯ ದಾಸರಹಳ್ಳಿ: ವಾರ್ಡ್ ಸಂಖ್ಯೆ 69ರ ಲಗ್ಗೆರೆಯ ಸರ್ಕಾರಿ ಆಸ್ಪತ್ರೆಯ ಮುಂಭಾಗ ಬಿಬಿಎಂಪಿ ವತಿಯಿಂದ ಕೈಗೆತ್ತಿಕೊಂಡಿರುವ 3 ಕೋಟಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಶ್ರೀನಿವಾಸ್ ಗುದ್ದಲಿಪೂಜೆ ನೆರವೇರಿಸಿದರು. ಲವಕುಶ ನಗರ, ರಾಜೀವ್ ಗಾಂಧಿ ನಗರ, ಪ್ರೀತಿ ನಗರ, ರಾಮಣ್ಣ ಬಡಾವಣೆ, ಕೆಂಪೇಗೌಡ ಬಡಾವಣೆ, ಸ್ವಾತಂತ್ರ್ಯ ಯೋಧರ ಕಾಲೋನಿ, ಮಲ್ಲೇಶ್ವರ ಬಡಾವಣೆ, ಪ್ರೀತಿನಗರ, ಕೆಂಪೇಗೌಡ ನಗರ, ನರಸಿಂಹಯ್ಯ ಬಡಾವಣೆ, ವಿಧಾನಸೌಧ ಲೇಔಟ್ ಮೊದಲಾದ ಬಡಾವಣೆಗಳ ಚರಂಡಿ, ಮೋರಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಸಿಬ್ಬಂದಿ ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ್ ರೆಡ್ಡಿ, ಗುತ್ತಿಗೆದಾರರಾದ ದಿನೇಶ್, ವೆಂಕಟೇಶ್, ರವೀಂದ್ರ, ಗೋಪಿ, ಮುಖಂಡರಾದ ಲಕ್ಷ್ಮೀ, ಲತಾ, ಕಳಸಪ್ಪ, ಹರೀಶ್, ಪೆರುಮಾಳ್ ರೆಡ್ಡಿ, ಅಧಿಕಾರಿಗಳಾದ ಕೀರಾನಾಯಕ್, ಶ್ರೀನಿವಾಸ್, ಸಾವಂಧಯ್ಯ ಇತರರು ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.