ADVERTISEMENT

`ಮೇಲು-ಕೀಳು ಭಾವನೆ ತೊಲಗಿಸಿ'

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 19:59 IST
Last Updated 6 ಜುಲೈ 2013, 19:59 IST

ರಾಜರಾಜೇಶ್ವರಿನಗರ: `ಬಡವ- ಶ್ರೀಮಂತ, ಮೇಲು-ಕೀಳು ಭಾವನೆ ತೊಲಗಿಸಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕಾಗಿದೆ' ಎಂದು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

ಎಚ್. ಗೊಲ್ಲಹಳ್ಳಿಯಲ್ಲಿ ಕಾಳಿಕಾಂಬ ಮಠೇಶ್ವರಿ ದೇವರ ಜೀರ್ಣೋದ್ಧಾರ ಮತ್ತು ನೂತನ ದೇವಸ್ಥಾನ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಂಠೀರವ ಸ್ಟುಡಿಯೋದ ಮಾಜಿ ಅಧ್ಯಕ್ಷ ಎಂ.ರುದ್ರೇಶ್, `ಶಿಥಿಲಗೊಂಡಿದ್ದ ಪುರಾತನ ದೇವಸ್ಥಾನವನ್ನು ್ಙ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು ನಿತ್ಯಪೂಜೆ- ಪುರಸ್ಕಾರಗಳು ನಡೆಯಲಿವೆ' ಎಂದರು.

ಈ ಸಂದರ್ಭದಲ್ಲಿ ಶಾಸಕ ಎಸ್.ಟಿ. ಸೋಮಶೇಖರ್, ಉದ್ಯಮಿ ಎಂ. ರಾಜಶೇಖರ್, ಟ್ರಸ್ಟಿ ಸಿ.ಎನ್. ಪರಮಶಿವಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.