ADVERTISEMENT

ಯಕ್ಷಗಾನ ಮೂಲಕ ಆಧುನಿಕ ಶಿಕ್ಷಣ: ಕೆ.ಇ.ರಾಧಾಕೃಷ್ಣ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 20:05 IST
Last Updated 23 ಮಾರ್ಚ್ 2014, 20:05 IST

ಬೆಂಗಳೂರು: ‘ಪೌರಾಣಿಕ ಕತೆಗಳ ಮೂಲಕ ಆಧುನಿಕ ಶಿಕ್ಷಣ ನೀಡುವ ಸಾಮರ್ಥ್ಯ ಯಕ್ಷಗಾನಕ್ಕಿದೆ’ ಎಂದು ಶಿಕ್ಷಣತಜ್ಞ ಕೆ.ಇ.ರಾಧಾ­ಕೃಷ್ಣ ತಿಳಿಸಿದರು.

ಕರ್ನಾಟಕ ಕಲಾದರ್ಶಿನಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಶಿವರಾಮ ಕಾರಂತ ಉತ್ಸವ ಕಾರ್ಯ­ಕ್ರಮದಲ್ಲಿ ಮಾತ­ನಾಡಿದರು.
‘ಸಾಂಸ್ಕೃತಿಕ ಪ್ರಕಾರಗಳಲ್ಲಿ ಒಂದಾದ ಯಕ್ಷಗಾನ ಕಲೆಯು ಮನರಂಜನೆಯಷ್ಟೆ ಅಲ್ಲದೇ ನೈತಿಕ ಶಿಕ್ಷಣ­ವನ್ನು ನೀಡುತ್ತದೆ. ದೇವಿ ಮಹಾತ್ಮೆಯ ಪ್ರಸಂಗಗಳು ಜನರಲ್ಲಿ ಭಕ್ತಿ ಭಾವವನ್ನು ಹುಟ್ಟಿಸುತ್ತದೆ’ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

‘ಯಕ್ಷಗಾನ ರಂಗದಲ್ಲಿರುವ ಹಲವು ಸವಾ­ಲು­ಗಳ ಬಗ್ಗೆಯೂ ಗಂಭೀರ ಚಿಂತನೆ ನಡೆಸಿ, ಪರಿಹಾರ ಕಂಡು­ಕೊಳ್ಳಬೇಕು’ ಎಂದರು.
ಬಲಿಪ ನಾರಾಯಣ ಭಾಗ­ವತರು, ಹಳ್ಳಾಡಿ ಜಯರಾಮಶೆಟ್ಟಿ ಅವರಿಗೆ  ಡಾ.ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.