ಬೆಂಗಳೂರು: ಜೆಡಿಎಸ್ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ವಿಕಾಸಪರ್ವ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರಣ್ಯಪುರದ ಸುವರ್ಣಮಹೋತ್ಸವ ಕ್ರೀಡಾಂಗಣದಿಂದ ಬೆಳಿಗ್ಗೆ 11 ಗಂಟೆಗೆ ಹೊರಟ ರ್ಯಾಲಿಯಲ್ಲಿ 1500 ಬೈಕ್ಗಳು ಹಾಗೂ 100ಕ್ಕೂ ಹೆಚ್ಚು ಆಟೊಗಳಲ್ಲಿ ಕಾರ್ಯಕರ್ತರು ಸಾಗಿದರು. ಕುವೆಂಪುನಗರ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಕೊಡಿಗೇಹಳ್ಳಿ, ಬ್ಯಾಟರಾಯನಪುರ, ಜಕ್ಕೂರು ಹಾಗೂ ಥಣಿಸಂದ್ರ ವಾರ್ಡ್ಗಳ ಹಾಗೂ ಜಾಲಾಹೋಬಳಿ ವ್ಯಾಪ್ತಿಯಗ್ರಾಮಗಳಲ್ಲಿ ಸಂಚರಿಸಿ, ರಾತ್ರಿ 7 ಗಂಟೆಗೆ ಯಾತ್ರೆಯನ್ನು ಕೊನೆಗೊಳಿಸಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಟಿ.ಜಿ.ಚಂದ್ರು, ‘ಈ ಬಾರಿಯ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲೇಬೇಕೆಂದು ಇಡೀ ಕ್ಷೇತ್ರದಕಾರ್ಯಕರ್ತರು ಯಾತ್ರೆಗೆ ಬಂದಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.