ADVERTISEMENT

ಯಲ್ಲಮ್ಮ ದೇವಿ ಕರಗ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2018, 19:30 IST
Last Updated 8 ಏಪ್ರಿಲ್ 2018, 19:30 IST
ಮುನಿಆಂಜನಪ್ಪ ಅವರು ಕರಗಹೊತ್ತು ಸಾಗಿದರು
ಮುನಿಆಂಜನಪ್ಪ ಅವರು ಕರಗಹೊತ್ತು ಸಾಗಿದರು   

ಬೆಂಗಳೂರು: ಕೆಂಗೇರಿಯ ಯಲ್ಲಮ್ಮ ದೇವಿಯ 44ನೇ ವರ್ಷದ ಕರಗ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಶನಿವಾರ ಮಧ್ಯರಾತ್ರಿ 1ಗಂಟೆಗೆ ಹೂವಿನ ಕರಗ ಶಕ್ಯೋತ್ಸವ ಆರಂಭವಾಯಿತು. ಭಕ್ತರು ರಸ್ತೆಯಲ್ಲಿ ರಂಗೋಲಿ ಬಿಡಿಸಿ, ಉತ್ಸವವನ್ನು ಸ್ವಾಗತಿಸಿ
ದರು. ಅಂಚೆಕೇರಿ, ಲಿಂಗಾಯಿತರ ಬೀದಿ, ಬಾಪೂಜಿ ಕಾಲೋನಿ ಸೇರಿ ಕೆಂಗೇರಿಯ ಪ್ರಮುಖ ಬೀದಿಗಳಲ್ಲಿ ಸಾಗಿದ ಕರಗ, ಗ್ರಾಮದ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು.

ಪೂಜಾರಿ ವೈ.ಮುನಿಆಂಜನಪ್ಪ ಅವರು ಮೊದಲ ಬಾರಿಗೆ ಕರಗವನ್ನು ಹೊತ್ತರು. 24ಕ್ಕೂ ಹೆಚ್ಚು ಉತ್ಸವ ಮೂರ್ತಿಗಳ ಹೂವಿನ ಪಲ್ಲಕ್ಕಿ ಹಾಗೂ ಬೆಳ್ಳಿರಥಗಳ ಮೆರವಣಿಗೆ ಜನರ ಗಮನಸೆಳೆಯಿತು.ಕೀಲು ಕುದುರೆ, ಪಟದ ಕುಣಿತ, ವೀರಗಾಸೆ, ಪೂಜಾಕುಣಿತ, ಚಂಡೆ, ಡೊಳ್ಳು, ಜನರನ್ನು ರಂಚಿಸಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.