ADVERTISEMENT

ಲಘು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 20:09 IST
Last Updated 1 ಜನವರಿ 2014, 20:09 IST

ಬೆಂಗಳೂರು: ಡಿ.ಕೆ. ಶಿವಕುಮಾರ್‌ ಮತ್ತು ರೋಷನ್‌ ಬೇಗ್‌ ಪ್ರಮಾಣ ವಚನ ಸ್ವೀಕಾರ ಸಮಾ­ರಂಭ ವೀಕ್ಷಿಸಲು ರಾಜಭವನಕ್ಕೆ ಬಂದಿದ್ದ ಬೆಂಬಲಿಗರನ್ನು ನಿಯಂತ್ರಿ­ಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು.

ಆಹ್ವಾನ ಇದ್ದವರಿಗೆ ರಾಜಭವನದ ಒಳಗೆ ಪ್ರವೇಶ ಕಲ್ಪಿಸ­ಲಾಗಿತ್ತು. ಆದರೆ, ರಾಜಭವನ ರಸ್ತೆ­ಯಲ್ಲಿ ಇಬ್ಬರ ಬೆಂಬ­ಲಿ­ಗರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಘೋಷಣೆ­ ಹಾಕಿ ಡೊಳ್ಳು ಬಾರಿಸಿದ ಬೆಂಬಲಿಗರು ಪೊಲೀಸ್‌ ಬಂದೋಬಸ್ತ್‌ ಮುರಿದು ಒಳನುಗ್ಗಲು ಯತ್ನಿಸಿದರು. ಆಗ ಪೊಲೀಸರು ಲಾಠಿ ಬೀಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.