ಬೆಂಗಳೂರು: `ದಾನಚಿಂತಾಮಣಿ ಅತ್ತಿಮಬ್ಬೆ ಹೆಸರಿನ ಪ್ರಶಸ್ತಿ'ಯನ್ನು ಲೇಖಕರಿಗೂ ನೀಡಬೇಕು ಎಂಬ ಸಚಿವೆ ಉಮಾಶ್ರೀ ಅವರ ಅಭಿಪ್ರಾಯಕ್ಕೆ ಲೇಖಕಿ ಪ್ರೊ.ಕಮಲಾ ಹಂಪನಾ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಆಯೋಜಿಸಿದ್ದ `ಶ್ರೀ ವಿಜಯ ಸಾಹಿತ್ಯ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಉಮಾಶ್ರೀ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲಾ ಹಂಪನಾ, `ಪಂಪ ಪ್ರಶಸ್ತಿ ಆರಂಭವಾದಂದಿನಿಂದ ಲೇಖಕನಿಗೇ ಸಲ್ಲುತ್ತಿದೆ. ಆದರೆ, ಈ ಪ್ರಶಸ್ತಿ ಲೇಖಕನಿಗಷ್ಟೇ ಸಲ್ಲಬೇಕು ಎಂಬ ನಿಯಮವಿಲ್ಲ.
ಇದನ್ನು ಗಮನಿಸಿಯೇ `ದಾನಚಿಂತಾಮಣಿ ಅತ್ತಿಮಬ್ಬೆ ಹೆಸರಿನ ಪ್ರಶಸ್ತಿ'ಯನ್ನು ಪ್ರಾರಂಭಿಸಿ ಪ್ರತಿ ವರ್ಷ ಒಬ್ಬ ಲೇಖಕಿಗೆ ಕೊಡಬೇಕೆಂದು ಹೋರಾಟ ಮಾಡಿದೆ. ಈ ಪ್ರಯತ್ನಕ್ಕೆ ಸರ್ಕಾರ ಸ್ಪಂದಿಸಿ ಪ್ರಶಸ್ತಿಯನ್ನು ಆರಂಭಿಸಿತು. ಈಗ ಮೂಲ ನಿಯಮವನ್ನು ಬದಲಿಸಿ ಲಿಂಗಾತೀತ ಪ್ರಶಸ್ತಿಯಾಗಿಸುವುದು ಸರಿಯಲ್ಲ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.