ADVERTISEMENT

ಲೋಕಸಭಾ ಚುನಾವಣೆಗೆ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಬೆಂಗಳೂರು: ಏ.17 ರಂದು ನಡೆಯ­ಲಿರುವ ಲೋಕಸಭಾ ಚುನಾವಣೆಗೆ ಚುನಾ­ವಣಾ ಆಯೋಗ ಪೂರ್ವ­ಭಾವಿ­ಯಾಗಿ ಸಿದ್ಧತೆ ನಡೆಸಿದ್ದು,  ಮತದಾರ­ರಲ್ಲಿ ಮತದಾನ ಮಾಡುವಂತೆ ಪ್ರೇರೇ­ಪಿ­ಸಲು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಜಾಗೃತಿ ಕಾರ್ಯಕ್ರಮಕ್ಕಾಗಿ ಸಮಿತಿ­ಯನ್ನು ರಚಿಸಿದ್ದು, ಜಿಲ್ಲಾ ಪಂಚಾ­ಯಿತಿ ಮುಖ್ಯ ಕಾರ್ಯ­ನಿರ್ವಾಹಕರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಹಯೋಗ­ದೊಂದಿಗೆ ಜಾಗೃತಿ ಕಾರ್ಯಕ್ರಮವನ್ನು ಬೆಂಗ­ಳೂರು ಗ್ರಾಮಾಂತರ ಜಿಲ್ಲೆ
(ಚಿಕ್ಕ­ಬಳ್ಳಾ­ಪುರ ಕ್ಷೇತ್ರ) ಯಲ್ಲಿ ಹಮ್ಮಿಕೊಂಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ವಾರ್ತಾ ಇಲಾಖೆಯ ವತಿಯಿಂದ ಇಲಾ­ಖೆಯ ಆಯ್ದ ಹೆದ್ದಾರಿ ಫಲಕ­ಗಳಿಗೆ ಮತದಾನ ಜಾಗೃತಿ ಕುರಿತು ಫ್ಲೆಕ್ಸ್‌ಗಳನ್ನು ಅಳವಡಿಸ­ಲಾ­ಗಿದೆ ಹಾಗೂ ದೇವನಹಳ್ಳಿ, ಹೊಸ­ಕೋಟೆ, ದೊಡ್ಡ­ಬಳ್ಳಾಪುರ, ನೆಲ­ಮಂಗಲ ತಾಲ್ಲೂಕುಗಳಲ್ಲಿರುವ ಕೊಳಚೆ­ಪ್ರದೇಶ ಹಾಗೂ ಕಾಲೋನಿ­ಗಳಲ್ಲಿ ಬೀದಿ ನಾಟಕ, ಸಂಗೀತ, ಕರಪತ್ರಗಳನ್ನು ಹಂಚುವ  ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.