ADVERTISEMENT

ಸಂಸ್ಕೃತಿ ಪರಿಕಲ್ಪನೆ ಪ್ರವಾಸೋದ್ಯಮಕ್ಕೆ ಪೂರಕ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST
ಸಂಸ್ಕೃತಿ ಪರಿಕಲ್ಪನೆ ಪ್ರವಾಸೋದ್ಯಮಕ್ಕೆ ಪೂರಕ
ಸಂಸ್ಕೃತಿ ಪರಿಕಲ್ಪನೆ ಪ್ರವಾಸೋದ್ಯಮಕ್ಕೆ ಪೂರಕ   

ಬೆಂಗಳೂರು: `ಕರಕುಶಲ ಹಾಗೂ ಸಂಸ್ಕೃತಿ ಗ್ರಾಮದ ಪರಿಕಲ್ಪನೆ ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುತ್ತದೆ~ ಎಂದು ಕೇಂದ್ರ ಸಚಿವ ಸುಬೋದ್ ಕಾಂತ ಸಹಾಯ್ ಹೇಳಿದರು.

ಬಿಡದಿಯಲ್ಲಿ ಇನ್ನೋವೇಟಿವ್ ಫಿಲಂ ಸಿಟಿಯ ಕರಕುಶಲ ಹಾಗೂ ಸಾಂಸ್ಕೃತಿಕ ಗ್ರಾಮದಲ್ಲಿ ಕೇರಳ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಇನ್ನೋವೇಟಿವ್ ಫಿಲಂ ಸಿಟಿಯು ದೇಶದ ಪ್ರಮುಖ ಮನರಂಜನಾ ಸ್ಥಳವಾಗಿದೆ. ಇಂತಹ ಮೇಳ ಹಾಗೂ ಹಬ್ಬಗಳು ರಾಜ್ಯದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮೌಲ್ಯಗಳನ್ನು ಒದಗಿಸುತ್ತದೆ~ ಎಂದರು.

ಐಎಫ್‌ಸಿಯ ಸರವಣ ಪ್ರಸಾದ್ ಮಾತನಾಡಿ, `ಕೇರಳದ ಶ್ರೀಮಂತಿಕೆಯ ಪ್ರದರ್ಶನ ಹಾಗೂ ಜನರಿಗೆ ಕೇರಳ ರಾಜ್ಯದ ಸಂಸ್ಕೃತಿ ಹಾಗೂ ಮೌಲ್ಯಗಳ ಬಗ್ಗೆ ಶಿಕ್ಷಿತರನ್ನಾಗಿಸುವುದು ಈ ಮೇಳದ ಉದ್ದೇಶವಾಗಿದೆ~ ಎಂದು ವಿವರಿಸಿದರು. ಈ ಮೇಳವು ಅ. 9 ರ ವರೆಗೂ ನಡೆಯಲಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.