ADVERTISEMENT

ಸಮರ್ಪಕ ಲೆವಿ ನಿಗದಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 20:05 IST
Last Updated 16 ಡಿಸೆಂಬರ್ 2013, 20:05 IST

ಬೆಂಗಳೂರು: ‘ಸರ್ಕಾರ ಗಿರಣಿಗಳ ಮಾಲೀಕರ ಜೊತೆ ಸಮಾಲೋಚಿಸಿ ಶೀಘ್ರ ಸರಿಯಾದ ಲೆವಿ ಪ್ರಮಾಣ ವನ್ನು ನಿಗದಿಪಡಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

‘ಸರ್ಕಾರವು ಅಕ್ಕಿ ಗಿರಣಿಗಳಿಂದ 2013–14ನೇ ಸಾಲಿನಲ್ಲಿ 13 ಲಕ್ಷ  ಟನ್‌ಗಿಂತಲೂ ಹೆಚ್ಚು ಅಕ್ಕಿಯನ್ನು ಲೆವಿ ಮೂಲಕ  ಸಂಗ್ರಹಿಸುವ ಗುರಿ ಹೊಂದಿದೆ.

ಸರ್ಕಾರದ ಈ ಕ್ರಮ ಅವೈಜ್ಞಾನಿಕವಾದುದ್ದು. ಈ ಕೆಟ್ಟ ಲೆವಿ  ಪದ್ಧತಿಯನ್ನು ರಾಜ್ಯದಲ್ಲಿ ರದ್ದುಪಡಿಸಬೇಕು ಎಂದು ಸೋಮ ವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.