ADVERTISEMENT

ಸರ್ಕಾರಿ ಜಮೀನು ದುರುಪಯೋಗ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 20:01 IST
Last Updated 10 ಮಾರ್ಚ್ 2014, 20:01 IST

ಬೆಂಗಳೂರು:  ‘ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್‌.ಪುರ ಹೋಬಳಿ, ಥಣಿಸಂದ್ರ ಗ್ರಾಮದ ಸರ್ವೆ ನಂ. 112 ರಲ್ಲಿನ 21 ಎಕರೆ ಸರ್ಕಾರಿ ಜಮೀನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಕೆಯಾ­ಗದೆ, ದುರುಪಯೋಗ­ವಾಗುತ್ತಿರುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಕಾನೂನು ರಕ್ಷಣಾ ವೇದಿಕೆಯ ಅಧ್ಯಕ್ಷ
ಎನ್‌.­ರಾಮಾಂಜಿನಪ್ಪ ಅವರು ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಜಮೀನು ಉಚಿತ ಕಣ್ಣಿನ ಆಸ್ಪತ್ರೆ, ಅನಾಥಾಶ್ರಮ, ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವವರಿಗೆ ತರಬೇತಿ ಕೇಂದ್ರಗಳನ್ನು ತೆರೆ­ಯಲು ಮಂಜೂರಾಗಿತ್ತು. ಜಮೀನು ಮಂಜೂರಾಗಿ 42 ವರ್ಷ­ಗಳೇ ಕಳೆದಿವೆ. ಆದರೆ, ಸಾರ್ವಜನಿಕರ ಸೇವೆಗೆ ಸದ್ಬಳಕೆಯಾಗದೆ ದುರುಪ­ಯೋಗವಾಗುತ್ತಿದೆ’ ಎಂದರು.

‘ಕೂಡಲೇ ಸರ್ಕಾರ ಈ ಜಮೀನನ್ನು ಮುಟ್ಟುಗೋಲು ಹಾಕಿಕೊಂಡು ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ಬಸ್ ನಿಲ್ದಾಣವನ್ನು ತೆರೆಯಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.