ADVERTISEMENT

ಹಾಲು ಉತ್ಪಾದಕರ ಸಂಘಕ್ಕೆ 4ನೇ ಬಾರಿ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 20:25 IST
Last Updated 21 ಫೆಬ್ರುವರಿ 2011, 20:25 IST

ನೆಲಮಂಗಲ: ಇಲ್ಲಿಗೆ ಸಮೀಪದ ದಾಸನಪುರ ಹಾಲು ಉತ್ಪಾದಕರ ಸಂಘಕ್ಕೆ ಸತತವಾಗಿ 4ನೇಬಾರಿ ಅಧ್ಯಕ್ಷರಾಗಿ ಡಿ.ಆರ್.ವಾಸುದೇವಮೂರ್ತಿ ಅವಿರೋಧ ಆಯ್ಕೆಯಾಗಿದ್ದಾರೆ.

ಟಿ.ಎ.ಪಿ.ಸಿ.ಎಂ.ಎಸ್.ಮಾಜಿ ಅಧ್ಯಕ್ಷ ಡಿ.ಎಂ.ಎಂ.ಗೌಡ, ನಿರ್ದೇಶಕರಾದ ಡಿ.ಎಂ.ಪ್ರಕಾಶ್, ಡಿ.ಎಂ.ಚಿಕ್ಕಹನುಮಯ್ಯ, ಮಹದೇವಯ್ಯ, ಡಿ.ಆರ್.ಮಾರೇಗೌಡ, ಡಿ.ಸಿ.ಮೂಡ್ಲೇಗೌಡ, ಬಿ.ನಾರಾಯಣಪ್ಪ, ಜಯಮ್ಮ, ಬಿ.ನರಸಿಂಹಮೂರ್ತಿ, ಕಾರ್ಯದರ್ಶಿ ಡಿ.ಎನ್.ಮಂಜುನಾಥ್ ಅಭಿನಂದಿಸಿದ್ದಾರೆ.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಡಿ.ಆರ್.ವಾಸುದೇವಮೂರ್ತಿ ಅವರು, ಎಲ್ಲ ಹಾಲು ಉತ್ಪಾದಕರ ಸಹಕಾರದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಂಘ ಉತ್ತಮ ಲಾಭಗಳಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.