ADVERTISEMENT

ಹೆಚ್ಚುತ್ತಿರುವ ಕ್ಷಯರೋಗ: ಜಾಗೃತಿ ಅಗತ್ಯ

ಇಂದು ವಿಶ್ವ ಕ್ಷಯ ರೋಗ ದಿನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 20:29 IST
Last Updated 23 ಮಾರ್ಚ್ 2014, 20:29 IST

ಬೆಂಗಳೂರು: ಒಂದರಿಂದ ನಾಲ್ಕು ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕ್ಷಯರೋಗ ತೀವ್ರತರದ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಹತ್ತಕ್ಕೂ ಹೆಚ್ಚು ಕ್ಷಯಪೀಡಿತ ಶಿಶುಗಳು ಪ್ರತಿ ತಿಂಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಹುತೇಕ  ಪ್ರಕರ­ಣ­ಗಳಲ್ಲಿ ಸೋಂಕು ಪೋಷಕರಿಂದ ಮಕ್ಕಳಿಗೆ ಹರಡಿರುತ್ತದೆ’ ಎಂದು ವಾಣಿ ವಿಲಾಸ ಆಸ್ಪತ್ರೆಯ ಶಿಶುತಜ್ಞೆ ಡಾ.ಆಶಾ ಬೆನಕಪ್ಪ ತಿಳಿಸಿದರು.

‘ಮಕ್ಕಳಿಂದ ಮಕ್ಕಳಿಗೆ ಈ ರೋಗ ಹರಡುವ ಸಾಧ್ಯತೆ ತೀರಾ ಕಡಿಮೆಯಿದೆ. ಮಕ್ಕಳಿಗೆ ಈ ಸೋಂಕು ತಗುಲಿದರೆ ತೀವ್ರತರದ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅದರಲ್ಲೂ ಐದು ವರ್ಷದ ಒಳಗಿನ ಮಕ್ಕಳು ಚೇತರಿಸಿಕೊಳ್ಳಲು ಕಷ್ಟಪಡುತ್ತಾರೆ’ ಎಂದು  ಹೇಳಿದರು.
‘ಕ್ಷಯ ರೋಗದ ಜತೆ ಎಚ್‌ಐವಿ ಸೋಂಕಿನ ಪರೀಕ್ಷೆಯನ್ನು ಕಡ್ಡಾ­ಯ­ವಾಗಿ ಮಾಡಿಸಬೇಕು’ ಎಂದರು.

ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಶಿಶುತಜ್ಞ ಡಾ.ಸಾಯಿ ಪ್ರಸಾದ್‌, ‘ಕ್ಷಯರೋಗ ಪೀಡಿತ ಮಕ್ಕಳ  ಕುರಿತು ಹೆಚ್ಚಿನ ನಿಗಾ ವಹಿಸ­ಬೇಕು. ಅಲ್ಲದೇ ಕ್ಯಾನ್ಸರ್‌ ಹಾಗೂ ಅಂಗಾಂಗ ಕಸಿಗೆ ಒಳಗಾದವರಲ್ಲಿ ಕ್ಷಯ ರೋಗ ಕಾಣಿಸಿಕೊಂಡರೆ ಆರೋಗ್ಯ ಸಮಸ್ಯೆ ಉಲ್ಬಣ­ಗೊಳ್ಳುತ್ತದೆ’ ಎಂದರು.

‘ಸರ್ಕಾರ ಉಚಿತವಾಗಿ ಔಷಧ ನೀಡುತ್ತಿದ್ದರೂ ಸಮರ್ಪಕವಾಗಿ ಚಿಕಿತ್ಸೆ ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯಿದೆ. ಹಾಗಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.