ADVERTISEMENT

ಹೆದ್ದಾರಿಯಲ್ಲಿ ದರೋಡೆ ಸಂಚು: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಮೇ 2018, 20:08 IST
Last Updated 10 ಮೇ 2018, 20:08 IST

ಬೆಂಗಳೂರು: ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆಗೆ ಸಂಚು ರೂಪಿಸಿದ್ದ ನಾಲ್ವರ ತಂಡದ ಮೇಲೆ ದಾಳಿ ನಡೆಸಿದ ಬಂಡೆಪಾಳ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಒಬ್ಬ ಪರಾರಿಯಾಗಿದ್ದಾನೆ.

ತಬ್ರೇಜ್‌ (28) ಹಬೀಜ್‌ (27), ವಸೀಂ (33) ಬಂಧಿತರು. ಮರದ ದೊಣ್ಣೆ, ಕಾರದ ಪುಡಿ, ಲಾಂಗು ಹಾಗೂ ಎರಡು ಆಟೊಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೊಸಪಾಳ್ಯದಿಂದ ಕೂಡ್ಲುಗೆ ಹೋಗುವ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಫಾರ್ಮ್‌ ಹತ್ತಿರ ನಿಂತಿದ್ದ ದರೋಡೆಕೋರರು ಆ ಮಾರ್ಗದಲ್ಲಿ ಓಡಾಡುವವರನ್ನು ಹಿಡಿದು, ಮಚ್ಚು, ಲಾಂಗು ತೋರಿಸಿ ದರೋಡೆ ಮಾಡುವ ಸಂಚು ರೂಪಿಸಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.