ADVERTISEMENT

‘ಜಾತಿಮತಗಳ ವಿಷವರ್ತುಲದಲ್ಲಿ ವಿ.ವಿ’

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2014, 19:30 IST
Last Updated 16 ಫೆಬ್ರುವರಿ 2014, 19:30 IST
ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಆರ್ಗನೈಸೇಷನ್‌ ಆಫ್‌ ಇಂಡಿಯಾ ನಗರ­ದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಮಾತನಾಡಿ­ದರು. ರಾಷ್ಟ್ರೀಯ ಕಾನೂನು ಶಾಲೆಯ ಸಂಶೋಧಕ ಡಾ.ಚಂದ್ರಶೇಖರ ಐಜೂರು,  ಸಂಘಟನೆಯ ರಾಜ್ಯ ಅಧ್ಯಕ್ಷ ತೌಸಿಫ್‌ ಅಹ್ಮದ್ ಚಿತ್ರದಲ್ಲಿ ಇದ್ದಾರೆ
ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಆರ್ಗನೈಸೇಷನ್‌ ಆಫ್‌ ಇಂಡಿಯಾ ನಗರ­ದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಮಾತನಾಡಿ­ದರು. ರಾಷ್ಟ್ರೀಯ ಕಾನೂನು ಶಾಲೆಯ ಸಂಶೋಧಕ ಡಾ.ಚಂದ್ರಶೇಖರ ಐಜೂರು, ಸಂಘಟನೆಯ ರಾಜ್ಯ ಅಧ್ಯಕ್ಷ ತೌಸಿಫ್‌ ಅಹ್ಮದ್ ಚಿತ್ರದಲ್ಲಿ ಇದ್ದಾರೆ   

ಬೆಂಗಳೂರು: ‘ರಕ್ತಗತವಾಗಿ ಭಾರತೀ­ಯರು ಮಾನವೀಯತೆಯ ಮೂರ್ತಿ­ಗಳು. ಹೀಗಿದ್ದೂ, ವಿಶ್ವವಿದ್ಯಾಲಯ, ರಾಜಕೀಯ ಕ್ಷೇತ್ರಗಳಲ್ಲಿ ಜಾತಿ ಹಾಗೂ ಮತವೆಂಬುದು ವಿಷವರ್ತುಲವಾಗಿ ರೂಪುಗೊಂಡಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಆರ್ಗನೈ­ಸೇಷನ್‌ ಆಫ್‌ ಇಂಡಿಯಾ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಪ್ರಸಕ್ತ ಶೈಕ್ಷ­ಣಿಕ ಸ್ಥಿತಿಗತಿ: ವಿದ್ಯಾರ್ಥಿ ಯುವ­ಜನತೆ­ಯ ಸಮಸ್ಯೆ ಪರಿಹಾರ– ಒಂದು ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಕಾನೂನು ಶಾಲೆ ಸಂಶೋಧಕ ಡಾ.ಚಂದ್ರಶೇಖರ ಐಜೂರು, ‘ಹಿಂದುಳಿದ, ದಲಿತ ಹಾಗೂ ಮುಸ್ಲಿಂ ವಸತಿನಿಲಯಗಳಲ್ಲಿ ಈ ಜನಾಂಗದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತಿದೆ. ಇದ­ರಿಂದ ವಿದ್ಯಾರ್ಥಿಗಳಲ್ಲಿಯೇ ಪ್ರತ್ಯೇಕತೆ ಹುಟ್ಟು­ಹಾಕಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.