ADVERTISEMENT

‘ಟಿಪ್ಪು ವಿ.ವಿಗೆ ಜಮೀನು ನೀಡಿ’

​ಪ್ರಜಾವಾಣಿ ವಾರ್ತೆ
Published 4 ಮೇ 2014, 19:02 IST
Last Updated 4 ಮೇ 2014, 19:02 IST
ಟಿಪ್ಪು ಸುಲ್ತಾನ್‌ ಸಂಯುಕ್ತ ರಂಗ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್‌ ಅವರ 215ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಬಳಿಕ ಚಾಮರಾಜ­ಪೇಟೆಯ ಟಿಪ್ಪು ಬೇಸಿಗೆ ಅರಮನೆಯಿಂದ ಶ್ರೀರಂಗಪಟ್ಟಣದ ಟಿಪ್ಪು ಸಮಾಧಿವರೆಗೆ ಯುವಕರು ಹುತಾತ್ಮ ಯಾತ್ರೆ ಆರಂಭಿಸಿದರು 	–ಪ್ರಜಾವಾಣಿ ಚಿತ್ರ
ಟಿಪ್ಪು ಸುಲ್ತಾನ್‌ ಸಂಯುಕ್ತ ರಂಗ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್‌ ಅವರ 215ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಬಳಿಕ ಚಾಮರಾಜ­ಪೇಟೆಯ ಟಿಪ್ಪು ಬೇಸಿಗೆ ಅರಮನೆಯಿಂದ ಶ್ರೀರಂಗಪಟ್ಟಣದ ಟಿಪ್ಪು ಸಮಾಧಿವರೆಗೆ ಯುವಕರು ಹುತಾತ್ಮ ಯಾತ್ರೆ ಆರಂಭಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಟಿಪ್ಪು ಸುಲ್ತಾನ್‌ ವಿಶ್ವ­ವಿದ್ಯಾಲಯಕ್ಕೆ ರಾಜ್ಯ ಸರ್ಕಾರ ಆದಷ್ಟು ಬೇಗ ಜಮೀನು ಮಂಜೂರು ಮಾಡ­ಬೇಕು’ ಎಂದು ಸಾಹಿತಿ ಡಾ.ಕೆ.ಮರುಳ­ಸಿದ್ದಪ್ಪ ಹೇಳಿದರು.

ಟಿಪ್ಪು ಸುಲ್ತಾನ್‌ ಸಂಯುಕ್ತ ರಂಗ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್‌ ಅವರ 215ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು.

‘ಟಿಪ್ಪು ಸುಲ್ತಾನ್‌ ವಿವಿಗೆ ಜಮೀನು ನೀಡಲು ಸರ್ಕಾರ ವಿಳಂಬ ಮಾಡು­ತ್ತಿದೆ. ನಿಯೋಗದಲ್ಲಿ ತೆರಳಿ ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಮಾತು-­ಕತೆ ನಡೆಸುವುದು ಅಗತ್ಯ’ ಎಂದರು.

ಇದೇ ಸಂದರ್ಭದಲ್ಲಿ ಚಾಮರಾಜ­ಪೇಟೆಯ ಟಿಪ್ಪು ಬೇಸಿಗೆ ಅರಮನೆ­ಯಿಂದ ಶ್ರೀರಂಗಪಟ್ಟಣ­ದಲ್ಲಿರುವ ಟಿಪ್ಪು ಸಮಾಧಿವರೆಗೆ ಹೊರಟ ಹುತಾತ್ಮ ಯಾತ್ರೆಗೆ ಲೇಖಕ ತಲಕಾಡು ಚಿಕ್ಕರಂಗೇಗೌಡ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.