ADVERTISEMENT

‘ಮಾನಸಿಕ ಗಟ್ಟಿತನದಿಂದ ಸಂಗೀತ ಸಾಧನೆ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 20:26 IST
Last Updated 8 ಮಾರ್ಚ್ 2014, 20:26 IST
ಸುಂದರ ಪ್ರಕಾಶನವು ನಗರದಲ್ಲಿ ಶನಿ­ವಾರ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗಾಯಕಿ ಬಿ.ಕೆ.ಸುಮಿತ್ರ ಅವರನ್ನು ಸನ್ಮಾನಿಸಲಾಯಿತು. ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್‌, ಹಿರಿಯ ನಟ ಶಿವರಾಂ, ಕವಿಗಳಾದ ಎಂ.ಎನ್‌.ವ್ಯಾಸರಾವ್‌, ಬಿ.ಆರ್.ಲಕ್ಷ್ಮಣ್‌ರಾವ್‌, ಗಾಯಕ ಎಸ್‌.ಪಿ.­ಬಾಲಸುಬ್ರಹ್ಮಣ್ಯಂ, ಬಿ.ಕೆ.ಸುಮಿತ್ರ ಅವರ ಸಂಗೀತದ ಗುರು ಎಂ.ಪ್ರಭಾಕರ್, ಪ್ರಕಾಶನದ ಸುಂದರ್ ಚಿತ್ರದಲ್ಲಿದ್ದಾರೆ 	–ಪ್ರಜಾವಾಣಿ ಚಿತ್ರ
ಸುಂದರ ಪ್ರಕಾಶನವು ನಗರದಲ್ಲಿ ಶನಿ­ವಾರ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗಾಯಕಿ ಬಿ.ಕೆ.ಸುಮಿತ್ರ ಅವರನ್ನು ಸನ್ಮಾನಿಸಲಾಯಿತು. ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್‌, ಹಿರಿಯ ನಟ ಶಿವರಾಂ, ಕವಿಗಳಾದ ಎಂ.ಎನ್‌.ವ್ಯಾಸರಾವ್‌, ಬಿ.ಆರ್.ಲಕ್ಷ್ಮಣ್‌ರಾವ್‌, ಗಾಯಕ ಎಸ್‌.ಪಿ.­ಬಾಲಸುಬ್ರಹ್ಮಣ್ಯಂ, ಬಿ.ಕೆ.ಸುಮಿತ್ರ ಅವರ ಸಂಗೀತದ ಗುರು ಎಂ.ಪ್ರಭಾಕರ್, ಪ್ರಕಾಶನದ ಸುಂದರ್ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಾನಸಿಕವಾಗಿ ಗಟ್ಟಿತನ ಇದ್ದರೆ ಮಾತ್ರ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಬಿ.ಕೆ.­ಸುಮಿತ್ರ ಅವರು ಅಂತಹ ಸಾಧನೆ ಮಾಡಿದ್ದಾರೆ’ ಎಂದು ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಶ್ಲಾಘಿಸಿದರು.

ಸುಂದರ ಪ್ರಕಾಶನವು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗೌರಿ ಸುಂದರ್‌ ಸಂಪಾದಿಸಿರುವ ಗಾಯಕಿ ಬಿ.ಕೆ.ಸುಮಿತ್ರ ಅವರ ಸಂಗೀತ ಪಯಣದ ಕುರಿತ ‘ಗಾನ ಯಾನ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಗಾಯನ ಕ್ಷೇತ್ರದಲ್ಲಿ 50 ವರ್ಷಗಳನ್ನು ಪೂರೈಸಿರುವ ಅವರು ಅಭಿನಂದನೆಗೆ ಅರ್ಹರು. ಅವರ ಜೊತೆಗೆ ‘ಮದುವೆ ಮದುವೆ ಮದುವೆ’ ಎಂಬ ಚಲ­ನ­ಚಿತ್ರದಲ್ಲಿ ಹಾಡಿದ್ದೇನೆ. ಅವ­ರೊಬ್ಬ ಸಂಗೀತದ ಅನನ್ಯ ಸಾಧಕಿ’ ಎಂದರು.
ರಾಜ್ಯಸಭಾ ಸದಸ್ಯ ಡಾ.ಎಂ.­ರಾಮಾಜೋಯಿಸ್‌ ಮಾತ­ನಾಡಿ, ‘ಸಂಗೀತ ಕಲಿಸಿದ ಆರಂಭಿಕ ಗುರು­ಗಳಾದ ಎಂ.ಪ್ರಭಾಕರ್‌, ಮಂಜಪ್ಪ, ತನ್ನ ಜೊತೆಗೆ ಹಾಡಿದ,  ಸಹಕಾರ ನೀಡಿದ ಎಲ್ಲರನ್ನು ಸುಮಿತ್ರಾ ಅವರು ಕೃತಿಯಲ್ಲಿ ಸ್ಮರಿಸಿಕೊಂಡಿದ್ದಾರೆ.

ಇದು ಅವರ ಸರಳತೆ, ದೊಡ್ಡತನಕ್ಕೆ  ಸಾಕ್ಷಿ’ ಎಂದರು.

ಕೃತಿ: ‘ಗಾನಯಾನ’
ಸಂಪಾದನೆ: ಗೌರಿ ಸುಂದರ್‌
ಬೆಲೆ: ರೂ 260

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.