ADVERTISEMENT

‘ವಿಜ್ಞಾನದ ಕೌತುಕಗಳಿಗೆ ಸಾಹಿತ್ಯದ ಲೇಪ ಹಚ್ಚಿ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ಬೆಂಗಳೂರು: ವಿಜ್ಞಾನದ ಕೌತುಕಗಳಿಗೆ ಸಾಹಿತ್ಯದ ಲೇಪ ಹಚ್ಚಿ ಸೃಜನಶೀಲರಾಗುವ ಬಗೆಯನ್ನು ವಿದ್ಯಾರ್ಥಿಗಳು ಕಲಿಯ­ಬೇಕು ಎಂದು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದ ನಿರ್ದೇಶಕ ಕೆ.ಜಿ.ಕುಮಾರ್ ಸಲಹೆ ನೀಡಿದರು.

ನಗರದಲ್ಲಿ ಬುಧವಾರ ನಡೆದ ದಕ್ಷಿಣ ಭಾರತೀಯ ವಿಜ್ಞಾನ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕಲ್ಪನೆಯನ್ನು ತೀಡುವ ಕಥಾ ಮಾದರಿಯಲ್ಲಿ ವಿಜ್ಞಾನ ವಿಷಯವನ್ನು ನಿರೂಪಿಸಿದರೆ, ಮಕ್ಕಳ ಮನಸ್ಸಿನಲ್ಲಿ ಸೃಜನ­ಸಶೀಲತೆ ಬೆಳೆಯುವುದಲ್ಲದೇ, ವಿಜ್ಞಾನ ಪ್ರವೃತ್ತಿ ಅರಳುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ನೊವೊ ನಾರ್ಡಿಸ್ಕ್’ ಸಂಸ್ಥೆಯ ಯೋಜನಾಧಿಕಾರಿ ಪಿ.ದಿನಕರನ್, ‘ನಾಟಕ, ಸಂಗೀತ, ಸಾಹಿತ್ಯದಂತಹ ಲಲಿತ ಕಲೆಗ­ಳೆ­ಡೆಗೆ ಆಸಕ್ತಿ ಬೆಳೆಸಿಕೊಳ್ಳುವುದರಿಂದ ಮಕ್ಕಳು ಪಠ್ಯ ವಿಷಯದಲ್ಲೂ ಚುರುಕಾಗುತ್ತಾರೆ’ ಎಂದು ಅಭಿಪ್ರಾಯ­ಪಟ್ಟರು.

ವಿಜ್ಞಾನ ನಾಟಕೋತ್ಸವದಲ್ಲಿ ಉಡುಪಿಯ ಸೇಂಟ್ ಮೇರಿಸ್ ಆಂಗ್ಲ ಪ್ರೌಢ ಶಾಲೆ (ಪ್ರಥಮ), ಕೇರಳದ ಎಕೆಎನ್ಎಂಎಂಎ ಸ್ಮಾರಕ  ಶಾಲೆ (ದ್ವಿತೀಯ), ತಮಿಳು­ನಾಡಿನ ಇಂದಿರಾಗಾಂಧಿ ಸರ್ಕಾರಿ ಪ್ರೌಢಶಾಲೆ (ತೃತೀಯ) ಸ್ಥಾನವನ್ನು ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.