ADVERTISEMENT

22ರಿಂದ ಬಿಬಿಎಂಪಿ ಲೋಕ ಅದಾಲತ್‌

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ಬೆಂಗಳೂರು: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜತೆಯಾಗಿ ಮಾ. 22, 24 ಹಾಗೂ 27ರಂದು ನಗರದಲ್ಲಿ ಲೋಕ ಅದಾಲತ್‌ ಏರ್ಪಡಿಸಿವೆ.

ಕಟ್ಟಡ ಮಂಜೂರಾತಿ ಪರವಾನಗಿ , ರಸ್ತೆ ಅಗೆತ ಅನುಮತಿ, ಖಾತಾ ವರ್ಗಾವಣೆ, ನೋಂದಣಿ, ಉದ್ದಿಮೆ ಪರವಾನಿಗೆ,  ನವೀಕರಣ, ಭೂಸ್ವಾಧೀನ ಪರಿಹಾರ, ಟಿಡಿಆರ್‌ ಅರ್ಜಿ ವಿಲೇವಾರಿ, ಜನನ–ಮರಣ ನೋಂದಣಿ, ಪಿಂಚಣಿ ಮೊದಲಾದ ಬಿಬಿ­ಎಂಪಿ ಸೇವೆ­­­ ಕುರಿತಂತೆ ಸಾರ್ವಜನಿಕರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳ­ಬಹುದು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ. ಎನ್‌.ಕೆ. ಪಾಟೀಲ್ 22­ರಂದು ಪುರಭವನದಲ್ಲಿ ಅದಾಲತ್‌ ಉದ್ಘಾಟಿಸಲಿದ್ದಾರೆ. ಅಂದು ಪೂರ್ವ ಹಾಗೂ ಪಶ್ಚಿಮ ವಲಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳ­ಬಹುದು. ದಕ್ಷಿಣ ವಲಯಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು 24­ರಂದು ಮಲ್ಲೇಶ್ವರದ ಐಪಿಪಿ ಕಟ್ಟಡದಲ್ಲಿ ಆಯೋಜಿಸಿರುವ ಸಭೆಯಲ್ಲಿ, ಇದೇ ಸ್ಥಳದಲ್ಲಿ 27ರಂದು ಉಳಿದ ಎಲ್ಲ ವಲಯಗಳ ಪ್ರಕರಣ ಇತ್ಯರ್ಥ ಮಾಡಿ­ಕೊಳ್ಳ­ಬಹುದು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.