ಬೆಂಗಳೂರು(ಪಿಟಿಐ): ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ಸಾವಿನ ಸರಣಿ ಮುಂದುವರಿದಿದ್ದು ಗುರುವಾರ ರವಿ ಹೆಸರಿನ 22 ವರ್ಷದ ಗಂಡು ಸಿಂಹ ಸಾವನ್ನಪಿದೆ ಎಂದು ಮೂಲಗಳು ತಿಳಿಸಿವೆ.
ವಯಸ್ಸಾಗಿದ್ದ ಕಾರಣ ಅದು ಹಲವಾರು ದೈಹಿಕ ಸಮಸ್ಯೆಗಳಿಂದ ಬಳಲುತಿತ್ತು. ಹಲ್ಲುಗಳು ದುರ್ಬಲವಾಗಿದ್ದು , ಅದಕ್ಕೆ ಗಟ್ಟಿಯಾದ ಆಹಾರವನ್ನು ಸೇವಿಸಲು ಆಗುತಿರಲಿಲ್ಲ.
ಕಳೆದ ಹತ್ತು ವರ್ಷಗಳ ಹಿಂದೆ ಗುಲ್ಬರ್ಗದ ಗೀತಾ ಸರ್ಕಸ್ ನಲ್ಲಿದ್ದ ಈ ಸಿಂಹವನ್ನು ರಕ್ಷಿಸಿ ಇಲ್ಲಿಗೆ ಕರೆತರಲಾಗಿತ್ತು ಎಂದು ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.