ADVERTISEMENT

22 ವರ್ಷದ ಸಿಂಹ ಸಾವು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 9:10 IST
Last Updated 25 ಫೆಬ್ರುವರಿ 2011, 9:10 IST

 ಬೆಂಗಳೂರು(ಪಿಟಿಐ):ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ಸಾವಿನ ಸರಣಿ ಮುಂದುವರಿದಿದ್ದು ಗುರುವಾರ ರವಿ ಹೆಸರಿನ 22 ವರ್ಷದ ಗಂಡು ಸಿಂಹ ಸಾವನ್ನಪಿದೆ ಎಂದು ಮೂಲಗಳು ತಿಳಿಸಿವೆ.

 ವಯಸ್ಸಾಗಿದ್ದ ಕಾರಣ  ಅದು ಹಲವಾರು ದೈಹಿಕ ಸಮಸ್ಯೆಗಳಿಂದ ಬಳಲುತಿತ್ತು. ಹಲ್ಲುಗಳು ದುರ್ಬಲವಾಗಿದ್ದು , ಅದಕ್ಕೆ ಗಟ್ಟಿಯಾದ ಆಹಾರವನ್ನು ಸೇವಿಸಲು ಆಗುತಿರಲಿಲ್ಲ.

ಕಳೆದ ಹತ್ತು ವರ್ಷಗಳ ಹಿಂದೆ ಗುಲ್ಬರ್ಗದ ಗೀತಾ ಸರ್ಕಸ್ ನಲ್ಲಿದ್ದ ಸಿಂಹವನ್ನು ರಕ್ಷಿಸಿ ಇಲ್ಲಿಗೆ ಕರೆತರಲಾಗಿತ್ತು ಎಂದು ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.