ADVERTISEMENT

22 ವರ್ಷದ ಸಿಂಹ ಸಾವು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 9:10 IST
Last Updated 25 ಫೆಬ್ರುವರಿ 2011, 9:10 IST

 ಬೆಂಗಳೂರು(ಪಿಟಿಐ):ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ಸಾವಿನ ಸರಣಿ ಮುಂದುವರಿದಿದ್ದು ಗುರುವಾರ ರವಿ ಹೆಸರಿನ 22 ವರ್ಷದ ಗಂಡು ಸಿಂಹ ಸಾವನ್ನಪಿದೆ ಎಂದು ಮೂಲಗಳು ತಿಳಿಸಿವೆ.

 ವಯಸ್ಸಾಗಿದ್ದ ಕಾರಣ  ಅದು ಹಲವಾರು ದೈಹಿಕ ಸಮಸ್ಯೆಗಳಿಂದ ಬಳಲುತಿತ್ತು. ಹಲ್ಲುಗಳು ದುರ್ಬಲವಾಗಿದ್ದು , ಅದಕ್ಕೆ ಗಟ್ಟಿಯಾದ ಆಹಾರವನ್ನು ಸೇವಿಸಲು ಆಗುತಿರಲಿಲ್ಲ.

ಕಳೆದ ಹತ್ತು ವರ್ಷಗಳ ಹಿಂದೆ ಗುಲ್ಬರ್ಗದ ಗೀತಾ ಸರ್ಕಸ್ ನಲ್ಲಿದ್ದ ಸಿಂಹವನ್ನು ರಕ್ಷಿಸಿ ಇಲ್ಲಿಗೆ ಕರೆತರಲಾಗಿತ್ತು ಎಂದು ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.