ADVERTISEMENT

ಯುವ ಬಂಟರ ರಾಷ್ಟ್ರೀಯ ಸಮಾವೇಶ 13ರಿಂದ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 19:54 IST
Last Updated 6 ಜನವರಿ 2018, 19:54 IST

ಬೆಂಗಳೂರು: ‘ ಬೆಂಗಳೂರಿನ ಬಂಟರ ಸಂಘದ ಯುವ ವಿಭಾಗವು ಇದೇ 13 ಮತ್ತು 14ರಂದು ‘ಯುವೈಕ್ಯ – ಯುವ ಬಂಟರ ರಾಷ್ಟ್ರೀಯ  ಸಮಾವೇಶವನ್ನು ಸಂಘದ ಆವರಣದಲ್ಲಿ  ಹಮ್ಮಿಕೊಂಡಿದೆ’ ಎಂದು ಯುವ ವಿಭಾಗದ ಮುಖ್ಯಸ್ಥ ಪ್ರೇಮ್‌ ಪ್ರಸಾದ್‌ ಶೆಟ್ಟಿ ತಿಳಿಸಿದರು.

ಶನಿವಾರ ಇಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಮಾವೇಶದಲ್ಲಿ ವಿವಿಧ ಕಂಪೆನಿಗಳಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಬಂಟ ಸಮುದಾಯದವರ ಸಭೆ ನಡೆಯಲಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ಉದ್ಯಮಿಗಳು ಸಂವಾದ, ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಾನ್ವಿತ ಯುವಕ–ಯುವತಿಯರಿಗೆ ‘ಯುವೈಕ್ಯ ಪುರಸ್ಕಾರ’ ನೀಡಲಾಗುವುದು’ ಎಂದರು.

ಮಾಹಿತಿಗೆ: 9845523324.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.