ಬೆಂಗಳೂರು: ಹೊರವಲಯದ ಕಾಚೋಹಳ್ಳಿ ಗೇಟ್ ಬಳಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಸವಾರ ಮುಸ್ತಾಕ್ (35) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
‘ಉತ್ತರ ಪ್ರದೇಶದ ಮುಸ್ತಾಕ್, ಕಾಚೋಹಳ್ಳಿ ಗೇಟ್ ಬಳಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಮಗುವಿನ ಜೊತೆಯಲ್ಲಿ ಬೈಕ್ನಲ್ಲಿ ಬೆಂಗಳೂರಿನತ್ತ ಹೊರಟಿದ್ದಾಗಲೇ ಈ ಅವಘಡ ಸಂಭವಿಸಿದೆ’ ಎಂದು ಮಾದನಾಯಕನಹಳ್ಳಿ ಪೊಲೀಸರು ಹೇಳಿದರು.
‘ಮಗುವನ್ನು ಎತ್ತಿಕೊಂಡಿದ್ದ ಪತ್ನಿ ಬೈಕ್ನ ಹಿಂಬದಿಯಲ್ಲಿದ್ದರು. ಮುಸ್ತಾಕ್ ಬೈಕ್ ಚಲಾಯಿಸುತ್ತಿದ್ದರು. ಹಿಂಬದಿಯಿಂದ ಬಂದ ಲಾರಿ ಬೈಕ್ಗೆ ಗುದ್ದಿತ್ತು. ರಸ್ತೆಯಲ್ಲೇ ಬಿದ್ದ ಮುಸ್ತಾಕ್ ಅವರ ತಲೆ ಮೇಲೆಯೇ ಲಾರಿ ಚಕ್ರ ಹರಿದಿದ್ದು.’‘ತೀವ್ರ ರಕ್ತಸ್ರಾವದಿಂದಾಗಿ ಮುಸ್ತಾಕ್ ಸ್ಥಳದಲ್ಲೇ ಇದ್ದರು. ಪತ್ನಿ ಹಾಗೂ ಮಗು ರಸ್ತೆ ಬದಿಯಲ್ಲಿ ಬಿದ್ದಿದ್ದರು. ಅವರಿಗೆ ಸಣ್ಣಪುಟ್ಟ ಗಾಯವಾಗಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.