ಬೆಂಗಳೂರು: ಕೇಂದ್ರದ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದಿರುವ ‘ಅಡಿಗಾಸ್ ಯಾತ್ರಾ’ ಸಂಸ್ಥೆಯು ದೇಶೀಯ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಚಾರ್ಧಾಮ್ ಸೇರಿದಂತೆ ಪ್ರಮುಖ ತಾಣಗಳ ಯಾತ್ರೆ ಮತ್ತು ಪ್ರವಾಸಕ್ಕೆ ಭಾರಿ ರಿಯಾಯಿತಿ ಘೋಷಿಸಿದೆ.
ಕಾಶಿ-ಗಯಾ, ಚಾರ್ಧಾಮ್, ಅಮರನಾಥ ಮುಂತಾದ ಯಾತ್ರೆಗಳಿಗೆ, ಶಿಮ್ಲಾ-ಮನಾಲಿ, ಅಂಡಮಾನ್, ಸಿಕ್ಕಿಂ- ಡಾರ್ಜಿಲಿಂಗ್, ಕಾಶ್ಮೀರ ಮುಂತಾದ ಸ್ಥಳಗಳಿಗೆ ಮಧುಚಂದ್ರ ಪ್ರವಾಸ ಕೈಗೊಳ್ಳುವವರಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು’ ಎಂದು ಸಂಸ್ಥೆಯ ಸಂಸ್ಥಾಪಕ ಕೆ. ನಾಗರಾಜ ಅಡಿಗ ಹೇಳಿದ್ದಾರೆ.
ಸಂಸ್ಥೆಯು ನೂತನವಾಗಿ ಬಿಡುಗಡೆ ಮಾಡಿರುವ ಕೈಪಿಡಿಯಲ್ಲಿ, ಹನಿಮೂನ್ ಪ್ಯಾಕೇಜ್, ಕಸ್ಟಮೈಸ್ಡ್ ಟೂರ್ಸ್, ಪಿಕ್ಸ್ಡ ಡಿಪಾರ್ಚರ್ಸ್ ಹಾಗೂ ಸ್ಟ್ಯಾಂಡರ್ಸ್ ಗ್ರೂಪ್ ಟೂರ್ ಗಳೆಂಬ ನಾಲ್ಕು ವಿಭಾಗಗಳು ಇವೆ. ಈ ಪ್ರವಾಸಗಳ ಬಗ್ಗೆ ಮಾಹಿತಿಗೆ, ಸಂಸ್ಥೆಯ ಬಸವನಗುಡಿ ಕಚೇರಿ ಸಂಪರ್ಕಿಸಬಹುದು.
ಸಂಪರ್ಕಕ್ಕೆ– 70222 59008, 96116 00810.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.