ADVERTISEMENT

ಅಂಶಿಗೆ ‘ಕೃಷಿ ಮಾಧ್ಯಮ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 23:34 IST
Last Updated 27 ಸೆಪ್ಟೆಂಬರ್ 2025, 23:34 IST
<div class="paragraphs"><p>ಅಂಶಿ ಪ್ರಸನ್ನಕುಮಾರ್‌</p></div>

ಅಂಶಿ ಪ್ರಸನ್ನಕುಮಾರ್‌

   

ಬೆಂಗಳೂರು: ಕೃಷಿ ಪತ್ರಿಕೋದ್ಯಮ ಉತ್ತೇಜಿಸಲು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ನೀಡುವ 2025ರ ‘ಹೊಂಬಾಳೆ ಸಂಹಿತ ಹರಿಣಿಕುಮಾರ್‌ ಅಲುಮ್ನಿ ಕೃಷಿ ಮಾಧ್ಯಮ’ ಪ್ರಶಸ್ತಿಗೆ ‘ಕನ್ನಡ ಪ್ರಭ‘ ಪತ್ರಿಕೆಯ ಪತ್ರಕರ್ತ ಮೈಸೂರಿನ ಅಂಶಿ ಪ್ರಸನ್ನಕುಮಾರ್‌ ಆಯ್ಕೆಯಾಗಿದ್ದಾರೆ. 

ಪ್ರಶಸ್ತಿಯು ಸ್ಮರಣಿಕೆ, ₹10 ಸಾವಿರ ನಗದು ಒಳಗೊಂಡಿದೆ. ಬೆಂಗಳೂರು ಕೃಷಿ ವಿವಿ ಹಳೆಯ ವಿದ್ಯಾರ್ಥಿಗಳ ಸಂಘವು ಹೆಬ್ಬಾಳದ ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನಲ್ಲಿ ಅ.11ರಂದು ಆಯೋಜಿಸುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾರ್ಯಕಾರಿ ಸಮಿತಿ ಸದಸ್ಯ ಕೆ. ಶಿವರಾಮು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.