ADVERTISEMENT

ತಿಂಗಳಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ: ಭರವಸೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 20:28 IST
Last Updated 4 ಜುಲೈ 2019, 20:28 IST
ಬೈರತಿ ಬಸವರಾಜ್ ಪರಿಶೀಲನೆ ನಡೆಸಿದರು. ನಾಮನಿರ್ದೇಶಿತ ಸದಸ್ಯ ಪಿ.ಜೆ.ಅಂಥೋನಿಸ್ವಾಮಿ, ಕಾಂಗ್ರೆಸ್‌ನ ವಾರ್ಡ್ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಇದ್ದರು.
ಬೈರತಿ ಬಸವರಾಜ್ ಪರಿಶೀಲನೆ ನಡೆಸಿದರು. ನಾಮನಿರ್ದೇಶಿತ ಸದಸ್ಯ ಪಿ.ಜೆ.ಅಂಥೋನಿಸ್ವಾಮಿ, ಕಾಂಗ್ರೆಸ್‌ನ ವಾರ್ಡ್ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಇದ್ದರು.   

ಕೆ.ಆರ್.ಪುರ: ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗದೆ ಕಾಣದೇ ಪಾಳುಬಿದ್ದಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಶಾಸಕ ಬೈರತಿ ಬಸವರಾಜ್ ಅವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಬಸವರಾಜ್‌ ಮಾತನಾಡಿ, ‘ಕೆ.ಆರ್.ಪುರದ ಟ್ಯಾಂಕ್ ರಸ್ತೆಯಲ್ಲಿ ಭವನದ ಕಾಮಗಾರಿ 2014ರಲ್ಲಿ ಪೂರ್ಣಗೊಂಡಿದೆ. ಆದರೆ ಮೂಲಸೌಕರ್ಯದ ಕೊರತೆ ಕಾರಣಕ್ಕೆ ಭವನವನ್ನು ಉದ್ಘಾಟಿಸಿರಲಿಲ್ಲ. ಈಗ ಸಮಾಜ ಕಲ್ಯಾಣ ಇಲಾಖೆ ₹25 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಸಮುದಾಯ ಭವನಕ್ಕೆ ಮೂಲಸೌಕರ್ಯ ಒದಗಿಸಲಾಗುವುದು. ತಿಂಗಳ ಒಳಗಾಗಿ ಭವನವನ್ನು ಉದ್ಘಾಟಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT