ADVERTISEMENT

ಬಿಎಸ್‌ಡಬ್ಲ್ಯುಎಂಎಲ್‌: ಸರ್ಫರಾಜ್ ಖಾನ್‌ ನೇಮಕ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 22:00 IST
Last Updated 9 ಜುಲೈ 2021, 22:00 IST
ಸರ್ಫರಾಜ್‌ ಖಾನ್
ಸರ್ಫರಾಜ್‌ ಖಾನ್   

ಬೆಂಗಳೂರು: ರಾಜಧಾನಿಯ ಕಸದ ಸಮಸ್ಯೆ ನಿವಾರಣೆಗೆ ರಚಿಸಲಾಗಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ಅವರನ್ನು ನೇಮಕ ಮಾಡಲಾಗಿದೆ.

ಕಂಪನಿಯ ಮುಖ್ಯನಿರ್ವಹಣಾ ಅಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಈ ನೇಮಕ ಮಾಡಿದ್ದಾರೆ.

ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಪರವಾಗಿ ಒಪ್ಪಂದಗಳಿಗೆ ಸಹಿ ಹಾಕುವ, ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸರ್ಫರಾಜ್‌ ಖಾನ್ ಅವರಿಗೆ ನೀಡಲಾಗಿದೆ.

ADVERTISEMENT

2021ರ ಮೇ 22ರಂದು 2013ರ ಕಂಪನಿ ಕಾಯ್ದೆಯ ಅನ್ವಯ, ಬಿಎಸ್‌ಡಬ್ಲ್ಯುಎಂಎಲ್ ರಚನೆಯಾಗಿದೆ. ಕಂಪನಿಯ ಮೊದಲ ನಿರ್ದೇಶಕರ ಮಂಡಳಿ ಸಭೆಯು ಶುಕ್ರವಾರ ನಡೆದಿದ್ದು, ಸಭೆಯ ನಿರ್ಣಯದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.