ಶಿವಮೊಗ್ಗ: ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿನ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುವ ಅಧಿಕಾರಿಗಳ ತಂಡವೇ ಇದೆ. ಅವರದ್ದೇ ಆದ ಸಂಪರ್ಕ ಜಾಲ ಇರುವುದೂ ಬೆಳಕಿಗೆ ಬಂದಿದೆ. ಎಷ್ಟೇ ದೊಡ್ಡ ಅಧಿಕಾರಿಗಳಿದ್ದರೂ ಮಟ್ಟ ಹಾಕಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳು ಗಾಂಜಾ ಸೇವಿಸುತ್ತಿರುವುದು ಪತ್ತೆಯಾಗುತ್ತಿರುವ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಎಲ್ಲಿ ಲೋಪ ಆಗಿದೆ ಎಂಬುದನ್ನು ಗಮನಿಸಲಿದ್ದೇವೆ. ವ್ಯವಸ್ಥೆ ಹಾಳು ಮಾಡುವ ಅಧಿಕಾರಿ
ಗಳ ವಿಚಾರಣೆ ನಡೆಸುತ್ತೇವೆ. ಆರೋಪ ಸಾಬೀತಾದರೆ ಎಫ್ ಐಆರ್ ದಾಖಲಿಸಿ ಶಿಕ್ಷಿಸುವ ಕೆಲಸ ನಡೆಯಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.