ADVERTISEMENT

ಬೆಂಗಳೂರು | ಸತೀಶ್ ಹಂಪಿಹೊಳಿ, ವಸುಂಧರಾ ಭೂಪತಿಗೆ ‘ಆರೋಹಣ ಕಲಾ ರೂಪ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 16:12 IST
Last Updated 15 ಅಕ್ಟೋಬರ್ 2024, 16:12 IST
ಸತೀಶ್‌ ಹಂಪಿಹೊಳಿ
ಸತೀಶ್‌ ಹಂಪಿಹೊಳಿ   

ಬೆಂಗಳೂರು: ಆರೋಹಣ ಸಂಸ್ಥೆ ನೀಡುವ ‘ಆರೋಹಣ ಕಲಾ ರೂಪ ಪ್ರಶಸ್ತಿ’ಗೆ ತಬಲಾ ವಾದಕ ಸತೀಶ್ ಹಂಪಿಹೊಳಿ ಹಾಗೂ ಆಯುರ್ವೇದ ವೈದ್ಯೆಯೂ ಆದ ಲೇಖಕಿ ಡಾ. ವಸುಂಧರಾ ಭೂಪತಿ ಆಯ್ಕೆಯಾಗಿದ್ದಾರೆ.

ಸಂಸ್ಥೆಯು ಇದೇ 19ರಂದು ಬೆಳಿಗ್ಗೆ 10 ಗಂಟೆಗೆ ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಆರನೇ ವಾರ್ಷಿಕೋತ್ಸವ ಹಮ್ಮಿಕೊಂಡಿದೆ. ಸಮಾರಂಭವನ್ನು ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. ಇದೇ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಸುಧೀಂದ್ರ ತಿಳಿಸಿದ್ದಾರೆ.

ಡಾ. ವಸುಂಧರಾ ಭೂಪತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT