ADVERTISEMENT

‘ಸಿಗರೇಟ್ ಸೇದಬೇಡಿ’ ಎಂದಿದ್ದಕ್ಕೆ ಪತ್ನಿ ಕಣ್ಣಿಗೇ ಚಾಕು ಚುಚ್ಚಿದ!

ಹಲ್ಲೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 19:53 IST
Last Updated 21 ಫೆಬ್ರುವರಿ 2019, 19:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಸಿಗರೇಟ್ ಸೇದಬೇಡಿ’ ಎಂದು ಬುದ್ಧಿ ಹೇಳಿದ ಪತ್ನಿ ಜತೆ ಜಗಳವಾಡಿದ ಕಾರ್ಮಿಕನೊಬ್ಬ, ಕೊನೆಗೆ ಕಣ್ಣಿಗೇ ಚಾಕು ಚುಚ್ಚಿ ಪರಾರಿಯಾಗಿದ್ದಾನೆ.

ಲಿಂಗರಾಜಪುರದ ಜಾನಕಿರಾಮ ಲೇಔಟ್‌ನಲ್ಲಿ ಫೆ.18ರಂದು ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಗಾಯತ್ರಿ (29) ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆ ಯತ್ನ (ಐಪಿಸಿ 307) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸರು, ಆರೋಪಿ ಕೆ.ಧರ್ಮ ಬಂಧನಕ್ಕೆ ಬಲೆ ಬೀಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಧರ್ಮನಿಗೆ ಸಿಗರೇಟ್‌ ಸೇದದಂತೆ ತಿಳಿಸಿದ್ದ ಗಾಯತ್ರಿ, ‘ಸಿಗರೇಟ್ ಸೇದು
ವುದಾದರೆ ಮನೆಯಲ್ಲಿ ಇರಲೇಬೇಡಿ’ ಎಂದಿದ್ದರು. ಇದರಿಂದ ಮಾತಿನ ಚಕಮಕಿ ನಡೆದಿದ್ದು, ಆರೋಪಿ ಅಡುಗೆ ಕೋಣೆಯಿಂದ ಚಾಕು ತಂದು ಎಡಗಣ್ಣಿಗೇ ಚುಚ್ಚಿ ಪರಾರಿಯಾಗಿದ್ದಾನೆ.

ADVERTISEMENT

ಸ್ಥಳೀಯರು ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರು. ಪ್ರಾಥಮಿಕ ಚಿಕಿತ್ಸೆ ನಂತರ ಮಿಂಟೊ ಆಸ್ಪತ್ರೆಯಲ್ಲಿ, ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.