ADVERTISEMENT

ಎಟಿಎಂ ಘಟಕದಲ್ಲಿ ಕೆಎಸ್‌ಆರ್‌ಪಿ ಸಿಬ್ಬಂದಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:52 IST
Last Updated 1 ಆಗಸ್ಟ್ 2019, 19:52 IST
   

ಬೆಂಗಳೂರು: ಎಟಿಎಂ ಘಟಕದಲ್ಲಿ ಸಹಾಯ ಮಾಡುವ ನೆಪದಲ್ಲಿ ಅಪರಿಚಿತನೊಬ್ಬ, ಕೆಎಸ್ಆರ್‌ಪಿ ಸಿಬ್ಬಂದಿ ಖಾತೆಯಿಂದ ₹ 62,548 ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಆ ಸಂಬಂಧ ಪರಸಪ್ಪ ಎಂಬುವರು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದಾರೆ.

‘ದೂರುದಾರರು ಜುಲೈ 28ರಂದು ಅವೆನ್ಯೂ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ ಎಟಿಎಂ ಘಟಕಕ್ಕೆ ಹೋಗಿದ್ದರು. ಹಣ ಡ್ರಾ ಮಾಡಿಕೊಳ್ಳಲು ಗೊಂದಲ ಉಂಟಾಗಿತ್ತು. ಹಿಂದೆಯೇ ಇದ್ದ ಯುವಕನೊಬ್ಬ, ದೂರುದಾರರ ಎಟಿಎಂ ಕಾರ್ಡ್ ಪಡೆದು ಪರೀಕ್ಷಿಸಿದ್ದ. ತಾಂತ್ರಿಕ ತೊಂದರೆ ಇದ್ದು, ಆ ಮೇಲೆ ಪ್ರಯತ್ನಿಸುವಂತೆ ಹೇಳಿ ವಾಪಸ್ ಕಳುಹಿಸಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಅದಾಗಿ ಕೆಲ ನಿಮಿಷಗಳ ನಂತರ, ಖಾತೆಯಿಂದ ₹62,548 ಡ್ರಾ ಆಗಿರುವ ಸಂದೇಶ ದೂರುದಾರರ ಮೊಬೈಲ್‌ಗೆ ಬಂದಿತ್ತು. ನಂತರವೇ ಅವರು ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.