ADVERTISEMENT

ಆಟೊರಿಕ್ಷಾ ಕದಿಯುತ್ತಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 19:01 IST
Last Updated 26 ನವೆಂಬರ್ 2022, 19:01 IST

ಬೆಂಗಳೂರು: ತಂಗುದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಆಟೊರಿಕ್ಷಾ ಕಳ್ಳತನ ಮಾಡುತ್ತಿದ್ದ ಆರೋಪಿ ಅಮ್ಜದ್ ಖಾನ್ (36) ಎಂಬುವರನ್ನು ಕೆ.ಪಿ. ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಜಗಜೀವನರಾಮ್ ನಗರ ಸಂಗಮ ವೃತ್ತದ ನಿವಾಸಿ ಅಮ್ಜದ್, ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದ. ಈತನನ್ನು ಬಂಧಿಸಿ ₹ 4.10 ಲಕ್ಷ ಮೌಲ್ಯದ ನಾಲ್ಕು ಆಟೊರಿಕ್ಷಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹ್ಯಾಂಡಲ್ ಲಾಕ್ ಮುರಿದು ಆಟೊರಿಕ್ಷಾ ಕದ್ದೊಯ್ಯುತ್ತಿದ್ದ ಆರೋಪಿ, ಕೆಲದಿನ ನಿರ್ಜನ ಪ್ರದೇಶಗಳಲ್ಲಿ ನಿಲ್ಲಿಸುತ್ತಿದ್ದ. ನಂತರ, ತನ್ನದೇ ಆಟೊರಿಕ್ಷಾ ಎಂಬುದಾಗಿ ಹೇಳಿ ಮಾರುತ್ತಿದ್ದ. ಬಂದ ಹಣವನ್ನು ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದ. ಕೆ.ಪಿ.ಅಗ್ರಹಾರದಲ್ಲಿ ಎರಡು ಆಟೊರಿಕ್ಷಾ ಹಾಗೂ ವಿಜಯನಗರ, ಕಲಾಸಿಪಾಳ್ಯದಲ್ಲಿ ತಲಾ ಒಂದು ಆಟೊರಿಕ್ಷಾ ಕದ್ದಿದ್ದ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.