ADVERTISEMENT

‘ಹೆಚ್ಚುವರಿ ಭತ್ಯೆ ಸೂಕ್ತ ನಿರ್ಧಾರ’

ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪಡೆದ ಪಶುವೈದ್ಯರ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 9:43 IST
Last Updated 20 ಜೂನ್ 2020, 9:43 IST
ಪಶು ಸಂಗೋಪನಾ ಇಲಾಖೆ
ಪಶು ಸಂಗೋಪನಾ ಇಲಾಖೆ   

ಬೆಂಗಳೂರು: ‘ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌.ಡಿ ಪಡೆದ ಪಶುವೈದ್ಯರಿಗೆ ಹೆಚ್ಚುವರಿ ಭತ್ಯೆ ನೀಡುವ ಇಲಾಖೆ ನಿರ್ಧಾರ ಸೂಕ್ತವಾಗಿದೆ’ ಎಂದು ಸ್ನಾತಕೋತ್ತರ ಮತ್ತು ಪಿಎಚ್‌.ಡಿ ಪದವೀಧರ ಪಶುವೈದ್ಯರು ಪ್ರತಿಪಾದಿಸಿದ್ದಾರೆ.

‘ಜಾನುವಾರುಗಳ ಜೀವ ರಕ್ಷಣೆಗೆ ಹೆಚ್ಚುವರಿ ಸೇವೆ ನೀಡಬೇಕೆಂಬ ಹಂಬಲದಿಂದ 800ಕ್ಕೂ ಹೆಚ್ಚು ಮಂದಿ ಸ್ನಾತಕೋತ್ತರ ಮತ್ತು ಪಿಎಚ್‌.ಡಿ ಪದವಿ ಪಡೆದುಕೊಂಡಿದ್ದಾರೆ. ಶಸ್ತ್ರಚಿಕಿತ್ಸಕ ಯಾವುದೋ ಒಂದು ಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಅಗತ್ಯ ಬಿದ್ದಾಗ ಇಡೀ ತಾಲ್ಲೂಕಿನಲ್ಲೇ ಓಡಾಡಿ ಸೇವೆ ಒದಗಿಸುತ್ತಾರೆ’ ಎಂದು ಪಶುವೈದ್ಯರ ಸಂಘದ ನಿಕಟಪೂರ್ವ ಅಧ್ಯಕ್ಷ ಶಿವಶರಣಪ್ಪ ಯಲಗೋಡ, ಸ್ನಾತಕೋತ್ತರ ಪದವೀಧರರ ಸಂಘದಅಧ್ಯಕ್ಷ ಟಿ.ಎಸ್. ಶ್ರೀಧರಮೂರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT