ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಆರಂಭಕ್ಕೂ ಮೊದಲೇ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ಅವರು ಐಟಿಸಿ ಗಾರ್ಡೇನಿಯಾದಿಂದ ಹೊರ ನಡೆದಿದ್ದಾರೆ.
‘ಏಕೆ ಹೋಗ್ತಾ ಇದ್ದೀರಿ, ಬೇಸರ ಆಗಿದೆಯಾ’ ಎಂಬ ಪ್ರಶ್ನೆಗೆ, ‘ಇಲ್ರಿ ಚಹಾ ಕುಡಿಯಲು ಹೊಂಟಿದ್ದೀವಿ. ಇಲ್ಲಿ ನಮ್ಮಂತ ಬಡವರು ಕುಡಿಯುವ ಚಹ ಇಲ್ಲ ರೀ’ ಎಂದು ಯತ್ನಾಳ್ ಪ್ರತಿಕ್ರಿಯೆ ನೀಡಿ ಕಾರು ಏರಿ ಹೊರಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.