ADVERTISEMENT

‘ಮೂಲ ವಿಜ್ಞಾನ ನಿಲ್ಷಕ್ಯ ಸಲ್ಲ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 19:52 IST
Last Updated 6 ಮಾರ್ಚ್ 2019, 19:52 IST

ಬೆಂಗಳೂರು: ‘ದೇಶಿ ವಿಜ್ಞಾನ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನಗಳಿಗೆ ಎಲ್ಲರ ಸಹಕಾರ ಸಿಕ್ಕರೆ ಮಾತ್ರ ಉದ್ದೇಶಿತ ಯಶಸ್ಸು ದೊರೆಯುತ್ತದೆ’ ಎಂದು ಇಭಾನ ಡಿಜಿಟಲ್ ಅಡ್ವಾನ್ಸ್ ಸಲೂಷನ್ಸ್ ಪ್ರೈವೇಟ್ ಲಿಮಿಟೆಡ್‍ನ ತಾಂತ್ರಿಕ ನಿರ್ದೇಶಕ ಪಿ.ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.

ಕಾಸ್ಮೋಸ್ ಕ್ಲಬ್, ಆರ್ಯಭಟ ಕ್ಲಬ್ ಟೆಕ್ ಝೋನ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಲಬ್‌ನ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ವಿಜ್ಞಾನಕ್ಕೆ ಮನ್ನಣೆ ಕಡಿಮೆಯಾಗಿ ತಂತ್ರಜ್ಞಾನಕ್ಕೆ ಹೆಚ್ಚು ಮಣೆ ಹಾಕಲಾಗುತ್ತಿದೆ. ಇದರಿಂದ ಮೂಲ ವಿಜ್ಞಾನ ಮೂಲೆಗುಂಪಾಗುತ್ತಾ ಬಂದಿರುವುದು ವಿಷಾದನೀಯ’ ಎಂದರು.

‘ದೇಶದಲ್ಲಿ ವೈಜ್ಞಾನಿಕ ಸಂಶೋಧನೆಗಳು ಸಾಕಷ್ಟು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಪೇಟೆಂಟ್‍ಗೆ ನೋಂದಣಿ ಆಗುತ್ತಿರುವ ಸಂಖ್ಯೆಗಳನ್ನು ಗಮನಿಸಿದರೆ ಇದರ ಪ್ರಮಾಣ ತಿಳಿಯುತ್ತದೆ. ವೈಜ್ಞಾನಿಕ ಸಂಶೋಧನೆಗಳತ್ತ ಗಮನಹರಿಸಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.