ADVERTISEMENT

ಕಾರಂತ ಬಡಾವಣೆ: ಅರ್ಜಿ ಸಲ್ಲಿಸಲು ಜ.25 ಕೊನೆ ದಿನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 20:28 IST
Last Updated 21 ಜನವರಿ 2023, 20:28 IST

ಬೆಂಗಳೂರು: ಶಿವರಾಮ ಕಾರಂತ ಬಡಾವಣೆಯಲ್ಲಿ ನಿರ್ಮಿಸಿಕೊಂಡಿರುವ ಕಟ್ಟಡಗಳ ಸಕ್ರಮ ಕೋರಿ ಅರ್ಜಿ ಸಲ್ಲಿಸಲು ಇದೇ 25 ಕೊನೆ ದಿನ.

ಈ ಬಡಾವಣೆಗೆ ಸ್ವಾಧೀನ ಆಗಿರುವ ಒಟ್ಟು 3,546 ಎಕರೆ 12 ಗುಂಟೆ ಜಮೀನಿನ ಮಧ್ಯಭಾಗದಲ್ಲಿ ಕೈಬಿಟ್ಟು ಹೋಗಿರುವ ಜಮೀನು ಸ್ವಾಧೀನ ಸಂಬಂಧ 245 ಎಕರೆ 16 ಗುಂಟೆ ಜಮೀನಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ.

ಈ ಜಮೀನಿನಲ್ಲಿ ಇರುವ ಕಟ್ಟಡಗಳ ಸಕ್ರಮಕ್ಕೆ ದಾಖಲೆಗಳ ಸಹಿತ ಅರ್ಜಿಯನ್ನು ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ಪಡೆದುಕೊಳ್ಳುತ್ತಿದೆ. ಕೊನೆ ದಿನದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಸಮಿತಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.