ADVERTISEMENT

ಆರ್‌ಎಸ್‌ಎಸ್‌ ‍ಪಥ ಸಂಚಲನದಲ್ಲಿ ಲಾಠಿ ಬೇಡ: ಭೀಮ್‌ ಆರ್ಮಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 22:10 IST
Last Updated 15 ನವೆಂಬರ್ 2025, 22:10 IST
<div class="paragraphs"><p>ಸಂಗ್ರಹ ಚಿತ್ರ</p></div>

ಸಂಗ್ರಹ ಚಿತ್ರ

   

ಬೆಂಗಳೂರು: ‘ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ‍ಪಥ ಸಂಚಲನ ನಡೆಸುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಪಥಸಂಚಲನದಲ್ಲಿ ಲಾಠಿ, ದೊಣ್ಣೆ ಬಳಸಲು ಸರ್ಕಾರ ಅನುಮತಿ ನೀಡಬಾರದು’ ಎಂದು ಭೀಮ್‌ ಆರ್ಮಿ ಆಗ್ರಹಿಸಿದೆ.

ಭೀಮ್ ಆರ್ಮಿ ಅಧ್ಯಕ್ಷ ರಾಜ್‌ ಗೋಪಾಲ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಪಥ ಸಂಚಲನಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ ಎಂದು ಗೊತ್ತಾಗಿದೆ. ಪ್ರಜಾಪ್ರಭುತ್ವದ ಹಕ್ಕಿನಡಿ ಪಥಸಂಚಲನ ಮಾಡಬಹುದು. ಬಿಎನ್‌ಎಸ್‌ಎಸ್–2023 ಸೆಕ್ಷನ್‌ 163ರಡಿ ಶಸ್ತ್ರ ವ್ಯತಿರಿಕ್ತ ಆಯುಧಗಳನ್ನು ಹಿಡಿದು ಮೆರವಣಿಗೆ ಮಾಡುವುದು ಕಾನೂನು ಬಾಹಿರ. ಆಯುಧಗಳು ಜನರಲ್ಲಿ ಭಯ ಹುಟ್ಟಿಸುವುದರ ಜೊತೆಗೆ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಒಂದು ವೇಳೆ ಲಾಠಿ ಹಿಡಿದು ಪಥ ಸಂಚಲನ ನಡೆಸಿದರೆ ಭೀಮ್‌ ಆರ್ಮಿ ಕಾನೂನು ಹೋರಾಟ ಮಾಡಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪೊಲೀಸ್‌ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.