ADVERTISEMENT

ಬೈಕ್‌ ಟ್ಯಾಕ್ಸಿ: ಮೇಲ್ಮನವಿ ಸಲ್ಲಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 16:19 IST
Last Updated 25 ಜನವರಿ 2026, 16:19 IST
ಎಸ್‌. ನಟರಾಜ ಶರ್ಮ
ಎಸ್‌. ನಟರಾಜ ಶರ್ಮ   

ಬೆಂಗಳೂರು: ಬೈಕ್‌ ಟ್ಯಾಕ್ಸಿಗಳ ಪರವಾಗಿ ಬಂದಿರುವ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಅಲ್ಲಿವರೆಗೆ ಬೈಕ್‌ ಟ್ಯಾಕ್ಸಿ ಸಂಚಾರವನ್ನು ನಿರ್ಬಂಧಿಸಬೇಕು ಎಂದು ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ಎಸ್‌. ನಟರಾಜ ಶರ್ಮ ಒತ್ತಾಯಿಸಿದ್ದಾರೆ.

‘ಬಿಳಿ ಅಥವಾ ಹಳದಿ ಫಲಕಗಳ (ನಂಬರ್‌ ಪ್ಲೇಟ್‌)  ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡಬಾರದು ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟವು ಪ್ರತಿಪಾದಿಸುತ್ತಲೇ ಬಂದಿದೆ. ಸರ್ಕಾರವು ಸಮಿತಿ ರಚಿಸಿ ವರದಿಯನ್ನು ಕೂಡ ಸಲ್ಲಿಸಿತ್ತು. ಆಟೊ ಚಾಲಕರ ಪರವಾಗಿ ನಾವು ಕೋರಿದ ಹಾಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಅಡ್ವೋಕೆಟ್ ಜನರಲ್ ಕಡೆಯಿಂದಲೇ ವಾದ ಮಾಡಿಸಿದ್ದರೂ, ನಮ್ಮ ವಾದವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಈಗ ಹೈಕೋರ್ಟ್‌ ಆದೇಶ ಹೊರಬಂದಿದೆ. ಆದೇಶದಲ್ಲಿ ಹಲವು ನ್ಯೂನತೆಗಳಿವೆ. ರಾಜ್ಯ ಸರ್ಕಾರವು ಮೆಲ್ಮನವಿ ಸಲ್ಲಿಸಲು ಮತ್ತು ಬೈಕ್‌ ಟ್ಯಾಕ್ಸಿ ಸೇವೆ ನಿರ್ಬಂಧಿಸಲು ಒತ್ತಾಯಿಸಿ ಲಿಖಿತವಾಗಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.