
ಪ್ರಜಾವಾಣಿ ವಾರ್ತೆ
ಬೆಂಗಳೂರು: ಅಖಿಲ ಭಾರತ ಬೌದ್ಧರ ವೇದಿಕೆಯು ಫೆ.8 ಮತ್ತು 9ರಂದು ಬುದ್ಧಗಯಾದಲ್ಲಿ ರಾಷ್ಟ್ರೀಯ ಅಧಿವೇಶನ ಹಮ್ಮಿಕೊಂಡಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಸಂಚಾಲಕ ಎಂ. ವೆಂಕಟಸ್ವಾಮಿ, ‘ಈ ಅಧಿವೇಶನಕ್ಕೆ ದಕ್ಷಿಣ ಭಾರತದಿಂದ 100 ಬೌದ್ಧ ಬಿಕ್ಕುಗಳು ತೆರಳಲಿದ್ದಾರೆ. ಬೌದ್ಧ ಮತ್ತು ಅಂಬೇಡ್ಕರ್ವಾದಿ ಸಂಘಟನೆಗಳ ರಾಜ್ಯ ಮುಖಂಡರು ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.