ADVERTISEMENT

‘ವರ್ಣತಂತು–ಜೀವಿಯ ಕೌತುಕ ಜೀವಸಾರ’ಕ್ಕೆ ಚಡಗ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 18:43 IST
Last Updated 9 ನವೆಂಬರ್ 2025, 18:43 IST
ರಮ್ಯಾ ಎಸ್‌.
ರಮ್ಯಾ ಎಸ್‌.   

ಬೆಂಗಳೂರು: ಕಾದಂಬರಿಕಾರ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ಕೋಟೇಶ್ವರದ ಎನ್‌.ಆರ್‌.ಎ.ಎಂ.ಎಚ್‌. ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆ ನೀಡುವ 2025ನೇ ಸಾಲಿನ ‘ಚಡಗ ಕಾದಂಬರಿ ಪ್ರಶಸ್ತಿ’ಗೆ ರಮ್ಯಾ ಎಸ್‌. ಅವರ ‘ವರ್ಣತಂತು–ಜೀವಿಯ ಕೌತುಕ ಜೀವಸಾರ’ ಕಾದಂಬರಿಯನ್ನು ಆಯ್ಕೆ ಮಾಡಲಾಗಿದೆ.

ಮೂವರು ತೀರ್ಪುಗಾರರಿದ್ದ ಸಮಿತಿಯು ಪ್ರಶಸ್ತಿಗೆ ಈ ಕಾದಂಬರಿಯನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ಪತ್ರ, ಸ್ಮರಣಿಕೆ, ₹ 10 ಸಾವಿರ ನಗದನ್ನು ಈ ಪ್ರಶಸ್ತಿ ಒಳಗೊಂಡಿದೆ. ಚಡಗ ಕಾದಂಬರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಡಿಸೆಂಬರ್‌ನಲ್ಲಿ ಆಯೋಜಿಸಲಾಗುವುದು ಎಂದು ಸ್ಪರ್ಧೆಯ ಸಂಚಾಲಕ ಉಪೇಂದ್ರ ಸೋಮಯಾಜಿ, ಪ್ರಶಸ್ತಿ ಸಮಿತಿಯ ಅಧ್ಯಕ್ಷ ಎನ್‌. ಭಾಸ್ಕರ ಆಚಾರ್ಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT