ಬೆಂಗಳೂರು: ಬಿಸ್ಕೆಟ್ ಮಾರಾಟ ಏಜೆನ್ಸಿಯಲ್ಲಿ ಪಾಲುದಾರಿಕೆ ನೀಡುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ಮನೋಜ್ ಎಂಬು ವರನ್ನು ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಚಾಮರಾಜಪೇಟೆಯ ನಂಜಾಂಬಾ ಅಗ್ರಹಾರ ನಿವಾಸಿ ಮನೋಜ್, ಎಂ.ಕಾಂ ಪದವೀಧರ. ಈತನ ವಿರುದ್ಧ ಐದು ಎಫ್ಐಆರ್ ದಾಖಲಾಗಿದ್ದವು. ತಲೆಮರೆಸಿಕೊಂ ಡಿದ್ದ ಆರೋಪಿ, ಹೊರ ರಾಜ್ಯಗಳಲ್ಲಿ ಸುತ್ತಾಡುತ್ತಿದ್ದ. ವಿಳಾಸ ಪತ್ತೆ ಮಾಡಿ ಇತ್ತೀಚೆಗೆ ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಪ್ರತಿಷ್ಠಿತ ಕಂಪನಿಗಳ ಬಿಸ್ಕೆಟ್ ಮಾರಾಟ ಏಜೆನ್ಸಿ ನಡೆಸುತ್ತಿರುವು ದಾಗಿ ಆರೋಪಿ ಹೇಳುತ್ತಿದ್ದ. ವ್ಯವಹಾರ ವೃದ್ಧಿಸಲು ಹಣಕಾಸಿನ ನೆರವು ನೀಡಿದರೆ, ಏಜೆನ್ಸಿಯಲ್ಲಿ ಸಮ ಪಾಲುದಾರಿಕೆ ಕೊಡುವುದಾಗಿ ತಿಳಿಸುತ್ತಿದ್ದ. ಆತನ ಮಾತು ನಂಬಿ ಐವರು, ₹ 1 ಕೋಟಿ ನೀಡಿದ್ದರು. ಹಣ ಪಡೆದಿದ್ದ ಆರೋಪಿ, ನೀಡದೇ ನಾಪತ್ತೆ ಯಾಗಿದ್ದ’ ಎಂದೂ ತಿಳಿಸಿವೆ.
‘ಆರೋಪಿಯ ತಂದೆ, ಕೆಎಸ್ ಆರ್ಟಿಸಿ ನೌಕರರಾಗಿದ್ದರು. ಅವರು ತೀರಿಕೊಂಡ ಬಳಿಕ ಅನುಕಂಪದ ಆಧಾರದಲ್ಲಿ ಮಗನಿಗೆ ಕೆಲಸ ಸಿಕ್ಕಿತ್ತು. ಕೆಲಸಕ್ಕೆ ಹೋಗದ ಆರೋಪಿ, ಬಿಸ್ಕೆಟ್ ಮಾರಾಟ ಏಜೆನ್ಸಿ ಹೆಸರಿನಲ್ಲಿ ಜನರನ್ನು ವಂಚಿಸಲಾರಂಭಿಸಿದ್ದ.ಸದ್ಯ ಐವರು ಮಾತ್ರ ದೂರು ನೀಡಿದ್ದು, ಬೇರೆ ಯಾರಾದರೂ ವಂಚನೆಗೀಡಾಗಿದ್ದರೆ, ದೂರು ನೀಡ ಬಹುದು’ ಎಂದೂ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.