ADVERTISEMENT

‘ಒಳಮೀಸಲಾತಿಯಲ್ಲಿ ‘ಕೋಲಂಬೊ’ಗೆ ಅನ್ಯಾಯ’: ಎನ್‌.ಆರ್‌.ನಾಯಕ್‌

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 20:08 IST
Last Updated 21 ಆಗಸ್ಟ್ 2025, 20:08 IST
<div class="paragraphs"><p>ನಾಗಮೋಹನದಾಸ್‌</p></div>

ನಾಗಮೋಹನದಾಸ್‌

   

ಬೆಂಗಳೂರು: ಒಳಮೀಸಲಾತಿಯಲ್ಲಿ ಬಂಜಾರ ಸಮಾಜಕ್ಕೆ ಮಾಡಿದ ಅನ್ಯಾಯವನ್ನು ವಿರೋಧಿಸಿ ಬಂಜಾರ(ಲಂಬಾಣಿ) ಸೇವಾ ಸಂಘದ ನೇತೃತ್ವದಲ್ಲಿ ಆ.22ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎನ್‌.ಆರ್‌.ನಾಯಕ್‌, ಕಾರ್ಯದರ್ಶಿ ಎಚ್‌.ಪಿ. ಸಿದ್ಯಾನಾಯಕ್‌ ತಿಳಿಸಿದ್ದಾರೆ.

ಕೋಲಂಬೊ (ಕೊರಮ, ಕೊರಚ, ಲಂಬಾಣಿ, ಭೋವಿ) ಸಮಾಜಕ್ಕೆ ಒಳಮೀಸಲಾತಿಯಲ್ಲಿ ಶೇ 7ರಷ್ಟು ಮೀಸಲಿಡಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ನ್ಯಾಯಮೂರ್ತಿ ನಾಗಮೋಹನದಾಸ್‌ ವರದಿಯ ಪ್ರಕಾರ ಕೋಲಂಬೊ ಜನಸಂಖ್ಯೆಯು ಬಲಗೈ, ಎಡಗೈ ಸಮುದಾಯಗಳ ಜನಸಂಖ್ಯೆಗಿಂತ ಹೆಚ್ಚಿದೆ. ಅಲ್ಲದೇ ಸೌಲಭ್ಯ ವಂಚಿತ 59 ಜಾತಿಗಳನ್ನು ಕೋಲಂಬೊ ಗುಂಪಿಗೆ ಸೇರಿಸಲಾಗಿದೆ. ಈ ಗುಂಪಿನ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.